ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ಸ್ಥಗಿತಗೊಳಿಸಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾಗಳು ಸ್ಥಗಿತಗೊಳಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಾಟಾಳ್ ಹೇಳಿದ್ದಾರೆ.

ಬೆಂಗಳೂರು (ಏ.22): ನಟ ಸತ್ಯರಾಜ್ ಕೇಳಿರುವ ವಿಷಾದ ಹಾಗೂ ಕ್ಷಮೆಯಾಚನೆ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳು ಸ್ಥಗಿತಗೊಳಿಸಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾಗಳು ಸ್ಥಗಿತಗೊಳಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಾಟಾಳ್ ಹೇಳಿದ್ದಾರೆ.

ಇನ್ಮುಂದೆ ಸತ್ಯರಾಜ್ ಎಲ್ಲಿಯೂ ಹೀಗೆ ಮಾತನಾಡಬಾರದು, ಮಾತನಾಡುವ ಮುನ್ನ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು, ಇಲ್ಲದಿದ್ದರೆ ಸತ್ಯರಾಜ್ ಅಭಿನಯದ ಚಿತ್ರಗಳಿಗೆ ನಿಷೇಧ ಹಾಕಲಾಗುತ್ತೆ, ಎಂದು ವಾಟಾಳೆ ಎಚ್ಚರಿಸಿದ್ದಾರೆ.

ಕನ್ನಡಪರ ಸಂಘಟನೆಗಳ ಈ ನಿರ್ಧಾರದೊಂದಿಗೆ ಬಾಹುಬಲಿ-2 ಸಿನಿಮಾ 28ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.