ಆದಿಚುಂಚನಗಿರಿ ಮಠವು ರಾಜಕಾರಣ ಮಾಡುತ್ತಿಲ್ಲವೆಂದೂ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಮಠವು ನಾಡಿಗೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಂಗಲ್​ ಹನುಮಂತಯ್ಯನವರಂಥ ನಾಯಕರನ್ನು ತಯಾರು ಮಾಡಿದೆ. ಅನಂತಕುಮಾರ್, ಯಡಿಯೂರಪ್ಪನವರಿಗೆ ಮಠ ಆಶೀರ್ವಾದ ಮಾಡಿದೆ. ಇಂಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತದೆ ಹೊರತು ರಾಜಕಾರಣ ಮಾಡಲ್ಲ ಎಂದವರು ಹೇಳಿದ್ದಾರೆ.

ಮಂಡ್ಯ(ಆ. 13): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭೇಟಿ ಕುರಿತು ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಮಠಕ್ಕೆ ಅಮಿತ್ ಶಾ ಏಕಾಏಕಿ ಭೇಟಿ ನೀಡಿಲ್ಲ. ಎರಡು ವರ್ಷಗಳ ಹಿಂದೆ ನಾವು ಭೇಟಿಗೆ ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ.

ಇದೇ ವೇಳೆ, ಆದಿಚುಂಚನಗಿರಿ ಮಠವು ರಾಜಕಾರಣ ಮಾಡುತ್ತಿಲ್ಲವೆಂದೂ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಮಠವು ನಾಡಿಗೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಂಗಲ್​ ಹನುಮಂತಯ್ಯನವರಂಥ ನಾಯಕರನ್ನು ತಯಾರು ಮಾಡಿದೆ. ಅನಂತಕುಮಾರ್, ಯಡಿಯೂರಪ್ಪನವರಿಗೆ ಮಠ ಆಶೀರ್ವಾದ ಮಾಡಿದೆ. ಇಂಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತದೆ ಹೊರತು ರಾಜಕಾರಣ ಮಾಡಲ್ಲ ಎಂದವರು ಹೇಳಿದ್ದಾರೆ.