ರಾಜ್ಯ ಯುವ ಕಾಂಗ್ರೆಸ್​​​ನಲ್ಲಿ ಭುಗಿಲೆದ್ದ ಭಿನ್ನಮತ | ಯುವ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ದಿನವೇ ಭಿನ್ನಮತ | ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಆರೋಪ | ಅಕ್ರಮದ ಬಗ್ಗೆ ನಾಯಕರ ಗಮನಕ್ಕೆ ತಂದರೂ ಪದಗ್ರಹಣ ಕಾರ್ಯಕ್ರಮ

ಬೆಂಗಳೂರು (ಜೂ. 07): ಯುವ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ದಿನವೇ ಭಿನ್ನಮತ ಸ್ಫೋಟಗೊಂಡಿದ್ದು, ಐವರು ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮವಾಗಿದೆ, ಅದರ ಬಗ್ಗೆ ನಾಯಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜಿನಾಮೆ ನೀಡಿದ ಉಪಾಧ್ಯಕ್ಷರುಗಳು ಆರೋಪಿಸಿದ್ದಾರೆ.

ನಾಯಕರ ಈ ಕ್ರಮದಿಂದ ಬೇಸತ್ತು ಉಪಾಧ್ಯಕ್ಷರುಗಳಾದ ಕೆಂಪರಾಜು, ರಾಜೇಂದ್ರ ರಾಜಣ್ಣ, ಕೆ ಶಿವಕುಮಾರ್, ಸಮೀಯಾ ತರ್ಬೇಜ್ ಹಾಗೂ ಕಾರ್ಯದರ್ಶಿ ಉಮೇಶ್​​ ಬೋರೇಗೌಡ ಯುವ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದಾರೆ.