ನಾರಿಮನ್ ಮನವೊಲಿಕೆ ಯಶಸ್ವಿ: ರಾಜ್ಯದ ಪರ ವಾದಿಸಲು ಒಪ್ಪಿದ ನಾರಿಮನ್
ಬೆಂಗಳೂರು(ಅ.04): ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದಿಸಲು ವಕೀಲ ಪಾಲಿ ನಾರಿಮನ್ ಸಮ್ಮತಿ ಸೂಚಿಸಿದ್ದಾರೆ.
ನಿನ್ನೆಯಷ್ಟೇ ನೀರು ಬಿಡದಿದ್ದರೆ ವಾದ ಮಾಡಲ್ಲ ಅಂತ ನಾರಿಮನ್ ಹೇಳಿದ್ದರು. ಆದರೆ, ನಾರಿಮನ್ ಮನವೊಲಿಸುವಲ್ಲಿ ರಾಜ್ಯದ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ನಾರಿಮನ್'ಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು. ಕೇಂದ್ರ ಸಚಿವ ಅನಂತ್ಕುಮಾರ್, ಸಚಿವ ಎಂ.ಬಿ.ಪಾಟೀಲ್ ಮತ್ತೆ ವಾದ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ನಾಯಕರ ಮನವಿಗೆ ಒಪ್ಪಿರುವ ನಾರಿಮನ್ ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಲಿದ್ದಾರೆ.