ಹ್ಯಾರಿಸ್ ಪುತ್ರ 2 ದಿನ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ: ಪೊಲೀಸ್ ವಶದಲ್ಲಿದ್ದಾಗಲೆ ಬೆಂಬಗಲಿರಿಂದ ಮತ್ತೆ ದರ್ಪ,ಮಾಧ್ಯಮದವರ ಮೇಲೆ ಹಲ್ಲೆ
ನಲಪಾಡ್ ಸೇರಿದಂತೆ ಹಲ್ಲೆಯಲ್ಲಿ ಭಾಗಿಯಾಗಿ 7 ಮಂದಿಯನ್ನು ಫೆ.21ರವರೆಗೂ ಸಿಸಿಬಿ ವಶಕ್ಕೆ ನೀಡಲಾಗಿದೆ
ಬೆಂಗಳೂರು(ಫೆ.19): ಉದ್ಯಮಿಯೊಬ್ಬರ ಪುತ್ರ ವಿದ್ಯತ್ ಮೇಲೆ ಹಲ್ಲೆ ಪೊಲೀಸ್ ವಶದಲ್ಲಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್'ನನ್ನು 8ನೇ ಎಪಿಎಂಸಿ ನ್ಯಾಯಾಲಯ 2 ದಿನಗಳ ಕಾಲ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಿದೆ.
ನಲಪಾಡ್ ಸೇರಿದಂತೆ ಹಲ್ಲೆಯಲ್ಲಿ ಭಾಗಿಯಾಗಿ 7 ಮಂದಿಯನ್ನು ಫೆ.21ರವರೆಗೂ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಲಾಗಿದೆ. 8 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡುವಂತೆ ಸಿಸಿಬಿ ಪರ ವಕೀಲರು ಕೋರಿದ್ದರು. ಆದರೆ 2 ದಿನಗಳ ಕಾಲ ಮಾತ್ರ ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ತೊಂದರೆ ನೀಡಿದರೆ ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಲ'ಪಾಡ್'ನಿಂದ ಇಲ್ಲ ಎಂದು ಉತ್ತರ ನೀಡಿದ್ದಾನೆ.
ಸಿಸಿಬಿ ವಶದಲ್ಲಿದ್ದಾಗ ಮಾಧ್ಯಮದವರ ಮೇಲೆ ಹಲ್ಲೆ
ಸಿಸಿಬಿ ಪೊಲೀಸ್ ವಶದಲ್ಲಿದ್ದಾಗ ಮಾಧ್ಯಮದವರು ಚಿತ್ರೀಕರಣ ಮಾಡುತ್ತಿದ್ದಾಗ ಮಾಧ್ಯಮ ಪ್ರತಿನಿಧಿಯ ಛಾಯಾಗ್ರಾಹಕರೊಬ್ಬರ ಮೇಲೆ ನಲಪಾಡ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಒಂದು ಕ್ಯಾಮರಾವನ್ನು ಕೂಡ ಜಖಂಗೊಳಿಸಿದ್ದಾರೆ.