ನಲಪಾಡ್ ಸರೆಂಡರ್ ಹಿಂದಿದೆ ಬಿಗ್ ಸೀಕ್ರೆಟ್!
ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪುಂಡಾಟಿಕೆ ಮೆರೆದು ಶರಣಾಗಲು ಒಪ್ಪದೇ ಪರಾರಿಯಾಗಿದ್ದ. ಆದರೆ ಆತನನ್ನು ಶರಣಾಗುವಂತೆ ಮಾಡಿಸಿದ್ದರ ಹಿಂದೆ ಸೀಕ್ರೆಟ್ ಒಂದು ಅಡಗಿದೆ ಎನ್ನಲಾಗಿದೆ.
ಬೆಂಗಳೂರು : ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪುಂಡಾಟಿಕೆ ಮೆರೆದು ಶರಣಾಗಲು ಒಪ್ಪದೇ ಪರಾರಿಯಾಗಿದ್ದ. ಆದರೆ ಆತನನ್ನು ಶರಣಾಗುವಂತೆ ಮಾಡಿಸಿದ್ದರ ಹಿಂದೆ ಸೀಕ್ರೆಟ್ ಒಂದು ಅಡಗಿದೆ ಎನ್ನಲಾಗಿದೆ.
ಶಾಸಕ ಹ್ಯಾರಿಸ್ ರಾಜಕೀಯ ಭವಿಷ್ಯಕ್ಕಾಗಿ ನಲಪಾಡ್ ಶರಣಾಗುವಂತೆ IPS ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇಬ್ಬರು ಐಜಿ ದರ್ಜೆಯ ಅಧಿಕಾರಿಗಳ ಸಲಹೆ ಪಡೆದಿದ್ದ ಶಾಸಕ ಹ್ಯಾರಿಸ್ ಮಗನನ್ನು ಶರಣಾಗುವಂತೆ ಸೂಚನೆ ನೀಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಐಪಿಎಸ್ ಅಧಿಕಾರಿಗಳಿಂದ ಹ್ಯಾರಿಸ್ ಸಲಹೆ ಪಡೆದುಕೊಂಡಿದ್ದರು ಎನ್ನಲಾಗಿದೆ.
ಆದರೆ ಆತ ಮಾತ್ರ ಜಾಮೀನು ಸಿಗುವವರೆಗೂ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ನಲಪಾಡ್ ಪಟಾಲಂ ಮೂಲಕ ಮಗನನ್ನು ಕರೆಸಿಕೊಂಡು ಹ್ಯಾರಿಸ್ ಸರೆಂಡರ್ ಮಾಡಿಸಿದ್ದರು ಎನ್ನಲಾಗಿದೆ.