ನಲಪಾಡ್ ಗೂಂಡಾಗಿರಿ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ.
ಬೆಂಗಳೂರು (ಫೆ. 26): ನಲಪಾಡ್ ಗೂಂಡಾಗಿರಿ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ.
Add Asianetnews Kannada as a Preferred Source

ಜಾಮೀನುಗಾಗಿ ಆರೋಪಿಗಳು ದೇವರ ಮೊರೆ ಹೋಗಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಾಲ್ವರು ಆರೋಪಿಗಳು ದೇವರ ಪೂಜೆ ಮಾಡಿದ್ದಾರೆ. ಜೈಲು ಅವರಣದಲ್ಲಿರುವ ಅಂಗಡಿಯಲ್ಲಿ ಪೂಜಾ ವಸ್ತುಗಳನ್ನ ಖರೀದಿಸಿರುವ ಆರೋಪಿಗಳಾದ ಬಾಲಕೃಷ್ಣ, ಮಂಜುನಾಥ್, ಅಭಿಷೇಕ್ ಮತ್ತು ಅರುಣ್ ಬಾಬುರಿಂದ ಜೈಲಿನಲ್ಲಿರುವ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ.
