Asianet Suvarna News Asianet Suvarna News

ನಾಗದೇವನಹಳ್ಳಿ ಡಿನೋಟಿಫಿಕೇಷನ್​​ ಪ್ರಕರಣ: ಮತ್ತೊಮ್ಮೆ ಪರಿಶೀಲನೆಗೆ ಹೈಕೋರ್ಟ್ ಸೂಚನೆ

ನಾಗದೇವನಹಳ್ಳಿ ಡಿನೋಟಿಫಿಕೇಷನ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಬಿಎಸ್​ಯಡಿಯೂರಪ್ಪ ಅವರಿಗೆ ಭಾಗಶಃ ರಿಲೀಫ್ ಸಿಕ್ಕಿದೆ.

Nagadevanahalli Denotification highcourt directs to re inquiry

ಬೆಂಗಳೂರು (ಜ.02): ನಾಗದೇವನಹಳ್ಳಿ ಡಿನೋಟಿಫಿಕೇಷನ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಬಿಎಸ್​ ಯಡಿಯೂರಪ್ಪ ಅವರಿಗೆ ಭಾಗಶಃ ರಿಲೀಫ್ ಸಿಕ್ಕಿದೆ.

ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್​ ಸಲ್ಲಿಸಿದ್ದರೂ, ವಿಶೇಷ ನ್ಯಾಯಾಲಯ ಕಾನ್ನಿಜೆನ್ಸ್​​ ತೆಗೆದುಕೊಂಡು ತನಿಖೆಗೆ ಆದೇಶಿಸಿತ್ತು. ಕೋರ್ಟ್​​ ತನಿಖೆಗೆ ಆದೇಶಿಸಿ ನೋಟೀಸ್​ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಸೋಮಣ್ಣ ಹೈಕೋರ್ಟ್​ಮೆಟ್ಟಿಲೇರಿದ್ದರು.

ಪ್ರಕರಣದ ತನಿಖೆ ಆದೇಶಿಸಿದ್ದು, ಹಾಗೂ ನೋಟಿಸ್​​ ಜಾರಿಗೊಳಿಸಿದ್ದು ಸರಿಯಲ್ಲ ಎಂದು ಹೈಕೋರ್ಟ್​​ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಕೆಳ ನ್ಯಾಯಾಲಯಕ್ಕೆ ಮತ್ತೊಮ್ಮೆ ಪರಿಶೀಲಿಸುವಂತೆ ಸೂಚಿಸಿದೆ. ಹೀಗಾಗಿ ಹೈಕೋರ್ಟ್​ನಲ್ಲಿ ಜಯ ಸಿಕ್ಕರೂ, ಮತ್ತೊಮ್ಮೆ ಪರಿಶೀಲನೆಗೆ ಸೂಚಿಸಿರುವುದು ಸೋಮಣ್ಣ ಮತ್ತಿತರ ಆರೋಪಿಗಳಿಗೆ ಇನ್ನೂ ಪೂರ್ಣ ಪ್ರಮಾಣದ ರಿಲೀಫ್​ ಸಿಕ್ಕಿಲ್ಲ.

Follow Us:
Download App:
  • android
  • ios