Asianet Suvarna News Asianet Suvarna News

ಅರ್ಜುನನ ಕುಶಲೋಪರಿ ವಿಚಾರಿಸಿದ ರಾಜವಂಶದ ಕುಡಿ

ಯದುವೀರ್ ಒಡೆಯರ್ ಕುಟುಂಬ ಸಮೇತರಾಗಿ ಈ ಬಾರಿ ಅಂಬಾರಿ ಹೊರಲಿರುವ ಅರ್ಜುನನ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಪುಟಾಣಿ ರಾಜಕುಮಾರ ಆದ್ಯವೀರ್ ಅವರೂ ಕೂಡ ಜೊತೆಗಿದ್ದುದು ವಿಶೇಷ. 

Mysuru Dasara 2018 Yaduveer Wadiyar Family Visits Arjuna
Author
Bengaluru, First Published Sep 22, 2018, 12:05 PM IST

ಮೈಸೂರು :  ವಿಶ್ವವಿಖ್ಯಾತ ಮೈಸೂರು ದಸರೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. 

ಅಲ್ಲದೇ ಇನ್ನೊಂದು ವಿಶೇಷವೆಂದರೆ ಈ ಬಾರಿ ದಸರೆಯಲ್ಲಿ ಪಾಲ್ಗೊಳ್ಳಲು ಮೈಸೂರಿನ ರಾಜಮನೆತನದಲ್ಲಿ ಮತ್ತೊಂದು ಕುಡಿ ಆಗಮನವಾಗಿದೆ. 

ಇನ್ನು ಆನೆಗಳು ದಸರೆಗಾಗಿ ಸಿದ್ಧವಾಗುತ್ತಿದ್ದು ಶನಿವಾರ ರಾಜ ಯದುವೀರ್ ಒಡೆಯರ್, ರಾಣಿ ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ಜೊತೆ ಆಗಮಿಸಿ ಅಂಬಾರಿ ಹೊರುವ ಅರ್ಜುನನ ಕ್ಷೇಮ ವಿಚಾರಿಸಿದ್ದಾರೆ.

ಅಕ್ಟೋಬರ್ 10 ರಿಂದ ಮೈಸೂರಿನಲ್ಲಿ ಅದ್ದೂರಿ ದಸರಾ ಮಹೋತ್ಸವ ಆರಂಭವಾಗಲಿದ್ದು, 19ರವರೆಗೆ ನಡೆಯಲಿದೆ. 

Follow Us:
Download App:
  • android
  • ios