ಶಿರಡಿ ಸಾಯಿ ಟ್ರಸ್ಟ್ ವಿರುದ್ಧ ಮುಸ್ಲಿಮರ ಆಕ್ರೋಶ
ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ ಬೇರೆ ನಾಮಫಲಕವನ್ನು ಅಳವಡಿಸಿದ್ದರಿಂದ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಮತ್ತೆ ಹಳೆಯ ನಾಮಫಲಕವನ್ನೇ ಅಳವಡಿಸಲಾಗಿದೆ.
ಅಹಮದ್ನಗರ: ಇಲ್ಲಿನ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ, ಅದರ ಜಾಗದಲ್ಲಿ ಹೊಸದಾಗಿ ದ್ವಾರಕಾಮಾಯ್ ಮಂದಿರ ಎಂಬ ಹೊಸ ನಾಮಫಲಕ ಅಳವಡಿಸಲಾಗಿದೆ.
ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಈ ಕ್ರಮದ ವಿರುದ್ಧ ಸ್ಥಳೀಯರು ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಭಾರೀ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು.
ಇದಕ್ಕೆ ಬೆದರಿದ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹೊಸ ನಾಮಫಲಕವನ್ನು ತೆರವುಗೊಳಿಸಿದೆ.