ಈ ಊರಲ್ಲಿ ಮುಸ್ಲೀಮರಿಂದಲೇ ಗೋವುಗಳ ರಕ್ಷಣಾ ಕಾರ್ಯ
ಹರ್ಯಾಣದಲ್ಲಿ ಹಿಂದುಗಳಷ್ಟೇ ಅಲ್ಲ ಮುಸ್ಲಿಮರು ಕೂಡ ಗೋ ರಕ್ಷಣೆಗೆ ಕೈ ಜೋಡಿಸಿದ್ದಾರೆ. ಹರ್ಯಾಣದ ಮುಸ್ಲಿಂ ಪ್ರಾಧಾನ್ಯ ಇರುವ ಮೇವತ್ ಪ್ರದೇಶದಲ್ಲಿ ಗೋ ರಕ್ಷಣೆ ಗುಂಪುಗಳನ್ನು ರಚಿಸಲಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಗೋ ರಕ್ಷಕರ ಗುಂಪೊಂದು ಪೆಹ್ಲುಖಾನ್ ಎಂಬಾತನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮುಸ್ಲಿಂ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.
ಹರ್ಯಾಣ (ಜ.19): ಹರ್ಯಾಣದಲ್ಲಿ ಹಿಂದುಗಳಷ್ಟೇ ಅಲ್ಲ ಮುಸ್ಲಿಮರು ಕೂಡ ಗೋ ರಕ್ಷಣೆಗೆ ಕೈ ಜೋಡಿಸಿದ್ದಾರೆ. ಹರ್ಯಾಣದ ಮುಸ್ಲಿಂ ಪ್ರಾಧಾನ್ಯ ಇರುವ ಮೇವತ್ ಪ್ರದೇಶದಲ್ಲಿ ಗೋ ರಕ್ಷಣೆ ಗುಂಪುಗಳನ್ನು ರಚಿಸಲಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಗೋ ರಕ್ಷಕರ ಗುಂಪೊಂದು ಪೆಹ್ಲುಖಾನ್ ಎಂಬಾತನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮುಸ್ಲಿಂ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.
ತಮ್ಮ ಸಮುದಾಯದ ಮೇಲೆ ನಿರಂತರ ನಡೆಯುತ್ತಿರುವ ದಾಳಿಯನ್ನು ತಪ್ಪಿಸುವ ಸಲುವಾಗಿ ಮುಸ್ಲಿಮರು ತಾವೇ ಗೋ ರಕ್ಷಣೆಯ ಕಾರ್ಯಕ್ಕೆ ಮುಂದಾಗಿದ್ದಾರೆ. ಹರ್ಯಾಣದಲ್ಲಿ ಗೋ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದ್ದು, ದಂಡದ ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.