Asianet Suvarna News Asianet Suvarna News

ಗೋರಖನಾಥ ಮಠವೇ ಯುಪಿ ಸಿಎಂ ಕರ್ಮಭೂಮಿ: ಯೋಗಿಯ ಮಠದಲ್ಲಿ ಮುಸ್ಲಿಮರೇ ಕಾಯಕಯೋಗಿಗಳು!

ಯೋಗಿ ಆದಿತ್ಯನಾಥ್, ಉ. ಪ್ರದೇಶ ಸಿಎಂ ಆದ ಬಳಿಕ ಈಗ ದೇಶಾದ್ಯಂತ ಚರ್ಚೆಯಲ್ಲಿರುವ ವ್ಯಕ್ತಿ. ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿ ಅನ್ನೋದು ಅವರ ವಿರೋಧಿಗಳ ವಾದ. ಇದಕ್ಕೆ ತಕ್ಕಂತೆ ಯೋಗಿ ಆದಿತ್ಯನಾಥ್​'ರ ಹಲವು ಹೇಳಿಕೆಗಳನ್ನೂ ನೋಡಿರಬಹುದು. ಆದರೆ, ಯೋಗಿ ಆದಿತ್ಯನಾಥರ ಮಠದ ಒಳಗೆ ಕಾಣುವ ಚಿತ್ರಣವೇ ಬೇರೆ. ಯೋಗಿಯ ಮಠದಲ್ಲಿ ಮುಸ್ಲಿಮರದ್ದೇ ಕಾಯಕ.

Muslim People Working With Uttar Pradesh CM Yogi Adityanath

ಉತ್ತರ ಪ್ರದೇಶ(ಮಾ.21): ಯೋಗಿ ಆದಿತ್ಯನಾಥ್, ಉ. ಪ್ರದೇಶ ಸಿಎಂ ಆದ ಬಳಿಕ ಈಗ ದೇಶಾದ್ಯಂತ ಚರ್ಚೆಯಲ್ಲಿರುವ ವ್ಯಕ್ತಿ. ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿ ಅನ್ನೋದು ಅವರ ವಿರೋಧಿಗಳ ವಾದ. ಇದಕ್ಕೆ ತಕ್ಕಂತೆ ಯೋಗಿ ಆದಿತ್ಯನಾಥ್​'ರ ಹಲವು ಹೇಳಿಕೆಗಳನ್ನೂ ನೋಡಿರಬಹುದು. ಆದರೆ, ಯೋಗಿ ಆದಿತ್ಯನಾಥರ ಮಠದ ಒಳಗೆ ಕಾಣುವ ಚಿತ್ರಣವೇ ಬೇರೆ. ಯೋಗಿಯ ಮಠದಲ್ಲಿ ಮುಸ್ಲಿಮರದ್ದೇ ಕಾಯಕ.

ಗೋರಖ್​ಪುರದ ಮಠ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಕರ್ಮಭೂಮಿ. ಯೋಗಿ ಆದಿತ್ಯನಾಥರ ಹೇಳಿಕೆಗಳನ್ನು ನೋಡಿದವರು, ಕೇಳಿದವರಿಗೆ ಕಾಣಿಸುವ ಯೋಗಿಯೇ ಬೇರೆ. ನಿಜವಾದ ಯೋಗಿಯೇ ಬೇರೆ. ಅದು ಅವರ ಮಠದಲ್ಲಿ ಎದ್ದು ಕಾಣುತ್ತದೆ.

‘ಯೋಗಿ’ಯ ಮಠದಲ್ಲಿ ಮುಸ್ಲಿಮರೇ ಕಾಯಕ ಯೋಗಿಗಳು

-ಯಾಸಿನ್ ಅನ್ಸಾರಿ - ಗೋರಖನಾಥ ದೇಗುಲದ ಕ್ಯಾಷಿಯರ್
-ಮೊಹಮ್ಮದ್ ಮುಥಾಕಿಂ - ದೇಗುಲದಲ್ಲಿ ಬಳೆ ಅಂಗಡಿ ವ್ಯಾಪಾರಿ
-ಹಮೀದಾ ಬೇಗಂ - ಗೋರಖನಾಥ ಮಠದ ಅಡುಗೆ ಮನೆ ಉಸ್ತುವಾರಿ
-ಯಾಸ್ಮಿನ್ ಅನ್ಸಾರಿ - ಮಠ ಮತ್ತು ದೇಗುಲದ ಸೂಪರ್​ ವೈಸರ್

ಇವರೆಲ್ಲ ನಿನ್ನೆ ಮೊನ್ನೆಯಿಂದ ಇರುವವರಲ್ಲ. ಆದಿತ್ಯನಾಥರು ರಾಜಕೀಯಕ್ಕೆ ಬರುವ ಮುನ್ನ, ಸುಮಾರು 20-30 ವರ್ಷಗಳಿಂದ ಮಠವನ್ನು ನೋಡಿಕೊಳ್ಳುತ್ತಿರುವವರು. ಆದಿತ್ಯನಾಥರ ಮುದ್ದಿನ ಹಸು ನಂದಿನಿಯನ್ನು ನೋಡಿಕೊಳ್ಳುವವ ಕೂಡಾ ಮುಸ್ಲಿಂ.

ಅವರೆಲ್ಲ ಯೋಗಿ ಆದಿತ್ಯನಾಥರನ್ನ ಚೋಟೇ ಮಹಾರಾಜ್ ಎನ್ನುತ್ತಾರಂತೆ..!
ಆದಿತ್ಯನಾಥ್ ಸಿಎಂ ಆದ ದಿನ ಇಲ್ಲಿನ ಮುಸ್ಲಿಮರೂ ಕುಣಿದು ಕುಪ್ಪಳಿಸಿದ್ದರು. ಏಕೆಂದರೆ, ಒಂದಾನೊಂದು ಕಾಲದಲ್ಲಿ ಸ್ಮಗ್ಲರ್​ಗಳು, ರೌಡಿಗಳ ಕೊಂಪೆಯಾಗಿದ್ದ ಗೋರಖ್​ಪುರದಲ್ಲಿ ರಕ್ಷಣೆ ಕೊಟ್ಟಿದ್ದು ಸರ್ಕಾರವಲ್ಲ. ಯೋಗಿ ಆದಿತ್ಯನಾಥ್.

ಶುದ್ಧವಾಗುತ್ತಿದೆ ಉ.ಪ್ರದೇಶ ಮುಖ್ಯಮಂತ್ರಿ ನಿವಾಸ..!

ಇಷ್ಟಿದ್ದರೂ, ಯೋಗಿ ಆದಿತ್ಯನಾಥ್ ಸಂಪೂರ್ಣ ಆಸ್ತಿಕ. ಸಂಪ್ರದಾಯ ಶರಣ. ಸಿಎಂ ಆದ ನಂತರ ಮುಖ್ಯಮಂತ್ರಿ ನಿವಾಸಕ್ಕೆ ಶುದ್ಧೀಕರಣ ಮಾಡಿಸುತ್ತಿದ್ಧಾರೆ. 9 ಪುರೋಹಿತರಿಂದ ಅಖಿಲೇಶ್ ಇದ್ದ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ಧಾರೆ. ಗಂಗಾಜಲ ಚಿಮುಕಿಸಿ, ಮನೆಯಲ್ಲಿ ಸ್ವಸ್ತಿಕ್ ಚಿಹ್ನೆ ಬರೆಸಿದ್ದಾರೆ. ಎಲ್ಲವೂ ಆದ ಮೇಲೆ ಮುಖ್ಯಮಂತ್ರಿಯಾಗಿ ಗೃಹ ಪ್ರವೇಶ ಮಾಡಲಿದ್ದಾರೆ ಯೋಗಿ ಆದಿತ್ಯನಾಥ್.

Latest Videos
Follow Us:
Download App:
  • android
  • ios