ಬೆಂಗಳೂರಲ್ಲಿ ಮತ್ತೆ ರಕ್ತದೋಕುಳಿ: ರೌಡಿಶೀಟರ್ ತಲೆಗೆ ಬಿತ್ತು ಮಚ್ಚಿನೇಟು
ರೌಡಿಶೀಟರ್ ಒಬ್ಬನನ್ನ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್ನ ಸದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ. 31 ವರ್ಷದ ಸುನೀಲ್ ಎಂಬಾತ ಕೊಲೆಯಾಗಿರುವ ರೌಡಿಶೀಟರ್.
ಬೆಂಗಳೂರು(ಡಿ.10): ರೌಡಿಶೀಟರ್ ಒಬ್ಬನನ್ನ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್ನ ಸದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ. 31 ವರ್ಷದ ಸುನೀಲ್ ಎಂಬಾತ ಕೊಲೆಯಾಗಿರುವ ರೌಡಿಶೀಟರ್.
ಕುಡಿತದ ಚಟಕ್ಕೆ ಬಿದ್ದಿದ್ದ ರೌಡಿ ಸುನೀಲ್ ನಿನ್ನೆ ಮದ್ಯಪಾನಕ್ಕಾಗಿ ಸದ್ದುಗುಂಟೆ ಪಾಳ್ಯದ ವೆಂಕಟೇಶ್ವರ ಲೇಔಟ್ನಲ್ಲಿರುವ ತೃಪ್ತಿ ಬಾರಿಗೆ ಬಂದಿದ್ದಾನೆ. ಈ ವೇಳೆ ಹಂತಕ ಪಡೆ ರಾತ್ರಿ 8.30ರ ಸುಮಾರಿಗೆ ಬಾರ್ ಒಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ದ್ದಾರೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನೀಲ್'ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಮೈಕೋಲೇಔಟ್ ಪೊಲೀಸ್ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ರೌಡಿಶೀಟರ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.