ಪರಾರಿ ಯತ್ನಿಸುತ್ತಿದ್ದ ದಾವೂದ್ ಅಣ್ಣನ ಮಗ ಮುಂಬೈನಲ್ಲಿ ಬಂಧನ!
ಪರಾರಿ ಯತ್ನ ವೇಳೆ ದಾವೂದ್ ಅಣ್ಣನ ಮಗ ಮುಂಬೈ ಏರ್ಪೋರ್ಟ್ಲ್ಲಿ ಪೊಲೀಸ್ ಬಲೆಗೆ| ದಾವೂದ್ ಇಬ್ರಾಹಿಂ ಸಂಬಂಧಿ ರಿಜ್ವಾನ್ ಕಸ್ಕ
ಮುಂಬೈ[ಜು.19]: ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿ ರಿಜ್ವಾನ್ ಕಸ್ಕರ್ನನ್ನು ಬುಧವಾರ ತಡರಾತ್ರಿ ಮುಂಬೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ದಾವೂದ್ನ ಸೋದರ ಇಕ್ಬಾಲ್ ಕಸ್ಕರ್ನ ಮಗನೇ ಈ ರಿಜ್ವಾನ್. 2017ರಲ್ಲಿ ಮುಂಬೈನ ಉದ್ಯಮಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ಹಲವರ ಹೆಸರುಗಳು ಬೆಳಕಿಗೆ ಬಂದಿದ್ದವು. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿದಾಗ ರಿಜ್ವಾನ್ ಹೆಸರು ಕೇಳಿಬಂದಿತ್ತು.
ಇದನ್ನರಿತ ರಿಜ್ವಾನ್ ದೇಶ ತೊರೆದು ಓಡಿಹೋಗಲು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗ ಅಲ್ಲಿಗೆ ತೆರಳಿದ ಪೊಲೀಸರು ರಿಜ್ವಾನ್ನನ್ನು ವಶಕ್ಕೆ ಪಡೆದಿದ್ದಾರೆ.