Asianet Suvarna News Asianet Suvarna News

ರಸ್ತೆ ತೆರವುಗೊಳಿಸಲು ಖುದ್ದು ಫೀಲ್ಡಿಗಿಳಿದ ಸಂಸದ ಪ್ರತಾಪ್ ಸಿಂಹ

’ದಕ್ಷಿಣ ಕಾಶ್ಮೀರ’ ಎಂದೇ ಖ್ಯಾತವಾಗಿರುವ ಕೊಡಗು ಈಗ ಅಕ್ಷರಶಃ ಸ್ಮಶಾನದಂತಾಗಿದೆ. ಇಲ್ಲಿನ ಜನರು ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆ ಭಾಗದಲ್ಲೇ ಇದ್ದು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. 
 

MP Pratap Simha join hands with Public in Kodagu flood
Author
Bengaluru, First Published Aug 21, 2018, 11:26 AM IST

ಕೊಡಗು (ಆ. 21): ’ದಕ್ಷಿಣ ಕಾಶ್ಮೀರ’ ಎಂದೇ ಖ್ಯಾತವಾಗಿರುವ ಕೊಡಗು ಈಗ ಅಕ್ಷರಶಃ ಸ್ಮಶಾನದಂತಾಗಿದೆ. ಇಲ್ಲಿನ ಜನರು ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆ ಭಾಗದಲ್ಲೇ ಇದ್ದು ಸಂತ್ರಸ್ತ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. 

ಸೋಮವಾರ ಪೇಟೆ ತಾಲ್ಲೂಕಿನ ಮಾದಾಪುರ , ಹಟ್ಟಿಹೊಳೆ ಮತ್ತು  ಮುಕ್ಕೋಡ್ಲು ವಿನಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಅಲ್ಲಿದೆ ಖುದ್ದು ಪ್ರತಾಪ್ ಸಿಂಹ ಭೇಟಿ ನೀಡಿ ಸಾರ್ವಜನಿಕರ ಜೊತೆ ಸೇರಿ ಕಾರ್ಯಾಚರಣೆಗೆ ಕೈ ಜೋಡಿಸಿದರು. ಪ್ರತಾಪ್ ಸಿಂಹರ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

 

 

ಸುಂಟಿಕೊಪ್ಪ ಹಾಗೂ ಮಾದಾಪುರದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಲಾಯಿತು ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು.

 

MP Pratap Simha join hands with Public in Kodagu flood

Follow Us:
Download App:
  • android
  • ios