ಹಿಂದುಗಳು ಒಗ್ಗಟ್ಟಾದಲ್ಲಿ ಪ್ರಪಂಚವನ್ನ ಸರಿದಾರಿಗೆ ತರಲು ಸಾಧ್ಯ
ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಲಕ್ನೋ : ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಉತ್ತರ ಪ್ರೇಶದಲ್ಲಿ ನಡೆದ ರಾಷ್ಟ್ರೋದಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕಾಗಿ ಎಲ್ಲರೂ ಕೂಡ ಒಗ್ಗಟ್ಟಾಗಬೇಕು.
ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳುವಳಿಕೆಯನ್ನು ಹೊಂದಿರುವುದು ಅಗತ್ಯ. ಇದರಿಂದ ಭಾರತೀಯ ವಿರೋಧಿ ಶಕ್ತಿಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.