ಮೋದಿ ಜನರ ಮನ್ ಕೀ ಬಾತ್ ಆಲಿಸುವುದಿಲ್ಲ: ಜೆಡಿ-ಯು ಟೀಕೆ
ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಾತನ್ನು ಕೂಡಾ ಆಲಿಸುವುದಿಲ್ಲ, ಸಂಸತ್ತಿನೊಳಗೆ ಬಾರದೇ ಹೊರಗಡೆ ಹೇಳಿಕೆಗಳನ್ನು ನೀಡುತ್ತಾರೆ ಎಂದು ಜೆಡಿ-ಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಕಿಡಿಕಾರಿದ್ದಾರೆ.
ನವದೆಹಲಿ (ಡಿ.26): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಬೆಂಬಲಿಸಿರುವ ಜೆಡಿಯು, ನಗದು ರಹಿತ ವ್ಯವಹಾರ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿ ತಮ್ಮ ಮನಸ್ಸಿನ ಮಾತು (ಮನ್ ಕೀ ಬಾತ್)ಗಳನ್ನಾಡುತ್ತಾರೆ, ಆದರೆ ಜನರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ, ಎಂದು ಜೆಡಿಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಾತನ್ನು ಕೂಡಾ ಆಲಿಸುವುದಿಲ್ಲ, ಸಂಸತ್ತಿನೊಳಗೆ ಬಾರದೇ ಹೊರಗಡೆ ಹೇಳಿಕೆಗಳನ್ನು ನೀಡುತ್ತಾರೆ ಎಂದು ತ್ಯಾಗಿ ಕಿಡಿಕಾರಿದ್ದಾರೆ.
ಸರ್ಕಾರದ ನಗದು-ರಹಿತ ಆರ್ಥಿಕತೆ ಬಗ್ಗೆ ಧೋರಣೆಯನ್ನು ತಮ್ಮ ಪಕ್ಷ ಬೆಂಬಲಿಸುವುದಿಲ್ಲ ಎಂದಿರುವ ತ್ಯಾಗಿ, ಗ್ರಾಮೀಣ, ಹಿಂದುಳಿದ ಜನರು ನಗದು-ರಹಿತ ವ್ಯವಹಾರಗಳನ್ನು ನಡೆಸುವುದು ಕಷ್ಟ. ಅಮೆರಿಕಾದಲ್ಲೂ ಶೇ.40ಕ್ಕಿಂತ ಹೆಚ್ಚು ಮಂದಿ ನಗದು-ರಹಿತ ವ್ಯವಹಾರವನ್ನು ನಡೆಸುವುದಿಲ್ಲ ಎಂದಿದ್ದಾರೆ.