ಚೆನ್ನೈನ ಕೊವತ್ತೂರು ಠಾಣೆಯಲ್ಲಿ ದೂರು ನೀಡಿರುವ ಶರವಣನ್, ಶಶಿಕಲಾ ಅವರು ಎಐಎಡಿಎಂಕೆ ಶಾಸಕರನ್ನು ಅಪಹರಿಸಿ ಗೋಲ್ಡನ್​ ಬೇ ರೆಸಾರ್ಟ್’ನಲ್ಲಿ ಕೂಡಿಟ್ಟಿದ್ದರೆಂದು ಆರೋಪಿಸಿದ್ದಾರೆ.

ಚೆನ್ನೈ (ಫೆ. 15): ಓ.ಪಿ. ಪನ್ನೀರ್ ಸೆಲ್ವಂ ಬಣದೊಂದಿಗೆ ಗುರುತಿಸಿಕೊಂಡಿರುವ ಅಣ್ಣಾ ಡಿಎಂಕೆ ಶಾಸಕ ಶರವಣನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಾಗೂ ಪಳನಿಸ್ವಾಮಿ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಚೆನ್ನೈನ ಕೊವತ್ತೂರು ಠಾಣೆಯಲ್ಲಿ ದೂರು ನೀಡಿರುವ ಶರವಣನ್, ಶಶಿಕಲಾ ಅವರು ಎಐಎಡಿಎಂಕೆ ಶಾಸಕರನ್ನು ಅಪಹರಿಸಿ ಗೋಲ್ಡನ್​ ಬೇ ರೆಸಾರ್ಟ್’ನಲ್ಲಿ ಕೂಡಿಟ್ಟಿದ್ದರೆಂದು ಆರೋಪಿಸಿದ್ದಾರೆ.

ಎಫ್’​​ಐಆರ್​ ದಾಖಲಿಸಿದ ಬಳಿಕ ರೆಸಾರ್ಟ್​ಗೆ ಪೊಲೀಸರು ರೆಸಾರ್ಟ್’ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರತಿಯೊಬ್ಬ ಶಾಸಕರಿಂದ ಪ್ರತ್ಯೇಕವಾಗಿ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.