ಸಿಸಿಟಿವಿ ದೃಶ್ಯ ನೀಡಲು ಫರ್ಜಿ ಕೆಫೆ ಮಾಲಿಕರ ನಕಾರ; ಕೆಫೆ ಮಾಲೀಕರಿಗೆ ಒತ್ತಡ ಹಾಕಿದ್ದಾರಾ ಹ್ಯಾರಿಸ್?
ನಲಪಾಡ್ ಗ್ಯಾಂಗ್’ನಿಂದ ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು ಪೊಲೀಸರು ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಫೆ.21): ನಲಪಾಡ್ ಗ್ಯಾಂಗ್’ನಿಂದ ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಸಾಕ್ಷ್ಯ ನಾಶ ಮಾಡಲು ಪೊಲೀಸರು ಹುನ್ನಾರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಪಾರ್ಕಿಂಗ್ ಸ್ಥಳದಲ್ಲೂ ವಿದ್ವತ್ ಮೇಲೆ ನಲಪಾಡ್ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾನೆ. ಪಾರ್ಕಿಂಗ್ ಸ್ಥಳದ ಸಿಸಿಟಿವಿ ದೃಶ್ಯ ನೀಡಲು ಫರ್ಜಿ ಕೆಫೆ ಮಾಲಿಕರ ಮೀನಾಮೇಷ ಎಣಿಸುತ್ತಿದ್ದಾರೆ. ಪಾರ್ಕಿಂಗ್ ಸ್ಥಳದ ಸಿಸಿಟಿವಿ ದೃಶ್ಯ ಇಲ್ಲ ಎನ್ನುತ್ತಿದ್ದಾರೆ ಫರ್ಜಿ ಕೆಫೆ ಮಾಲೀಕರು. ಘಟನೆ ನಡೆದ ದಿನವೇ ಫರ್ಜಿ ಕೆಫೆ ಮಾಲೀಕರಿಗೆ ಹ್ಯಾರಿಸ್ ಒತ್ತಡ ಹಾಕಿದ್ದಾರಾ? ಮಗನ ರಕ್ಷಣೆಗೆ ನಿಂತಿದ್ದಾರಾ ಹ್ಯಾರೀಸ್ ಎನ್ನುವ ಅನುಮಾನ ದಟ್ಟವಾಗಿದೆ.
ಕಾರ್ ಪಾರ್ಕಿಂಗ್ ಜಾಗದ ಸಿಸಿಟಿವಿ ಪಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರು ಫರ್ಜಿ ಕೆಫೆಯ ಭಾಗದ ಸಿಸಿಟಿವಿ ದೃಶ್ಯ ಮಾತ್ರ ಕಲೆಹಾಕಿದ್ದಾರೆ. ಯುಬಿಸಿಟಿ ಪಾರ್ಕಿಂಗ್ ಜಾಗ, ಇತರೆ ಜಾಗದ ದೃಶ್ಯವನ್ನು ಸಿಸಿಬಿ ಅಧಿಕಾರಿಗಳು
ಪಡೆದಿಲ್ಲ.