ಆದ್ರೆ ಇದುವರೆಗೂ ಮನೆಗೆ ಬಂದಿಲ್ಲ. ಈ ಬಗ್ಗೆ ತಂಗಡಗಿಯ ಮತ್ತೋರ್ವ ಸಹೋದರ ರವಿ ಪಾಟೀಲ್ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದಾರೆ

ಗಂಗಾವತಿ(ಜು.28): ಶಾಸಕ ಶಿವರಾಜ್ ತಂಗಡಿ ಸಹೋದರ ನಾಗರಾಜ್ ತಂಗಡಗಿ ಕಾಣೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಪಟ್ಟಣದಿಂದ ಜುಲೈ 24 ರಂದು ಕಾಣೆಯಾಗಿದ್ದಾರೆ. . ಜುಲೈ 24 ರಂದು ನಾಗರಾಜ್ ತಂಗಡಗಿ ಕ್ಷೌರ ಮಾಡಿಸಿಕೊಂಡು ಬರೋದಾಗಿ ಹೇಳಿ ಹೋಗಿದ್ರು. ಆದ್ರೆ ಇದುವರೆಗೂ ಮನೆಗೆ ಬಂದಿಲ್ಲ. ಈ ಬಗ್ಗೆ ತಂಗಡಗಿಯ ಮತ್ತೋರ್ವ ಸಹೋದರ ರವಿ ಪಾಟೀಲ್ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗರಾಜ ತಂಗಡಗಿ ನಾಪತ್ತೆ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ರವಿ ತಂಗಡಗಿ ದೂರಿನನ್ವಯ ಕಾರಟಗಿ ಠಾಣೆ ಪೋಲೀಸರು ನಾಗರಾಜ್ ತಂಗಡಿಗಾಗಿ ಹುಡುಕಾಟ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred