ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ  ಓದುತ್ತಿದ್ದರು.

ಬೀದರ್(ಸೆ.01): ಸಚಿವ ಈಶ್ವರ ಖಂಡ್ರೆ ಹತ್ತಿರದ ಸಂಬಂಧಿ ಸೇರಿದಂತೆ ಮೂವರು ಬಾಲಕರು ನಿನ್ನೆ ಶಾಲೆಯಿಂದ ಮನೆಗೆ ಬಂದ ನಂತರ ನಾಪತ್ತೆಯಾಗಿ'ದ್ದು ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

Add Asianetnews Kannada as a Preferred SourcegooglePreferred

ಕೊನೆಗೂ ಪೊಲೀಸರ ಸತತ ಪ್ರಯತ್ನದಿಂದ ನಾಪತ್ತೆಯಾದ ಮಕ್ಕಳು ತೆಲಂಗಾಣದ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾರೆ. ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ತಕ್ಷಣವೇ ಎಲ್ಲರೂ ಹೋಗಿದ್ದಾರೆ. ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೂ ಮಧ್ಯರಾತ್ರಿ ಯೇ ಮಕ್ಕಳು ಪತ್ತೆಯಾಗಿದ್ದಾರೆ.