ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂದಿರದ ಮ್ಯಾನೇಜರ್ ಸುಧನ್ವ, ಇದು ಬೆಳಕಿನ ಆಟವಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರು(ಫೆ. 28): ಸಾಯಿಬಾಬಾನಿಗೂ ಪವಾಡಕ್ಕೂ ಎಲ್ಲಿಲ್ಲದ ನಂಟು. ಇದಕ್ಕೆ ಇಲ್ಲೊಂದು ನಿದರ್ಶನ ಗೋಚರವಾಗಿದೆ. ಹುಣುಸೂರು ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಬಾಬಾ ವಿಗ್ರಹದ ಮುಂದೆ ಬೆಳಕಿನ ಮೂರ್ತಿಯೊಂದು ಮೂಡಿದ್ದು ವಿಸ್ಮಯಕ್ಕೆ ಕಾರಣವಾಗಿದೆ. ಹಳೇ ಬಿ.ಎಂ. ರಸ್ತೆಯ ಶಿರಡಿ ಸಾಯಿ ಮಂದಿರದಲ್ಲಿ ಈ ಅಚ್ಚರಿ ಮೂಡಿದ್ದು, ಬೆಳಕಿನಲ್ಲಿ ಸಾಯಿಬಾಬಾ ಆಕೃತಿ ಗೋಚರಿಸಿದೆ. ಯಾರ ಕಣ್ಣಿಗೂ ಗೋಚರಿಸದ ಈ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವೈಭವ 15 ಸೆಕೆಂಡುಗಳ ಕಾಲ ಇದೆ. ಸ್ವತಃ ಸಾಯಿಬಾಬಾನೇ ಪ್ರತ್ಯಕ್ಷರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಬೆಳಗ್ಗೆ 7.40ರ ಸಮಯದಲ್ಲಿ ಸಾಯಿ ಬಾಬಾ ಮೂರ್ತಿಯ ಮುಂದೆ ಅಗೋಚರ ಬೆಳಕೊಂದು ಕಂಡಿದೆ. ದೇವಸ್ಥಾನದಲ್ಲಿನ ವ್ಯವಸ್ಥಾಪಕರು ಆ ಸ್ಥಳಕ್ಕೆ ನೋಡಿದಾಗ ಆ ದೃಶ್ಯ ಕಾಣುತ್ತಿಲ್ಲ. ಆದರೆ, ಬಾಬಾ ಭಕ್ತರ ಮಹಾಪೂರವೇ ಈ ಮಂದಿರಕ್ಕೆ ಲಗ್ಗೆ ಇಡುತ್ತಿದೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂದಿರದ ಮ್ಯಾನೇಜರ್ ಸುಧನ್ವ, ಇದು ಬೆಳಕಿನ ಆಟವಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.