ನಾನು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ, ಡೌನ್​​ಲೋಡ್​ ಮಾಡಿಲ್ಲ. ನನ್ನ ಮೊಬೈಲ್​​ಗೆ ಅಶ್ಲೀಲ ಚಿತ್ರ ಕಳುಹಿಸಿದವರ ಮೇಲೂ ಕೇಸ್ ಹಾಕ್ತೀನಿ

ರಾಯಚೂರು(ನ.11): ಟಿಪ್ಪು ಜಯಂತಿ ವೇಳೆ ವೇದಿಕೆ ಮೇಲೆ ಅಶ್ಲೀಲ ಚಿತ್ರಗಳನ್ನು ನೋಡಿದ ಸಚಿವ ತನ್ವೀರ್​ ಸೇಠ್​​​, ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ. ನಾನು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ, ಡೌನ್​​ಲೋಡ್​ ಮಾಡಿಲ್ಲ. ನನ್ನ ಮೊಬೈಲ್​​ಗೆ ಅಶ್ಲೀಲ ಚಿತ್ರ ಕಳುಹಿಸಿದವರ ಮೇಲೂ ಕೇಸ್ ಹಾಕ್ತೀನಿ, ಜೊತೆಗೆ ಮಾಧ್ಯಮಗಳ ವಿರುದ್ಧವೂ ಮಾನನಷ್ಟ ಕೇಸ್​ ದಾಖಲು ಮಾಡುವೆ ಅಂತ ಗುಡುಗಿದ್ದಾರೆ. ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಲ್ಲದೆ ರಾಜೀನಾಮೆ ನೀಡಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಇಲ್ಲಿಯವರೆಗೆ ಹೇಳಿಲ್ಲ. ಘಟನೆ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿ ಎಲ್ಲವನ್ನು ವಿವರಿಸುತ್ತೇನೆ ಅಂತಾ ಹೇಳಿದ್ದಾರೆ.