ಮಾಧ್ಯಮದ ವಿರುದ್ಧ ಗರಂ ಆದ ಸಚಿವ ಜಾರ್ಜ್

ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರಣೆಗಾಗಿ ಸಿ.ಬಿ.ಐ ನೋಟಿಸ್ ಜಾರಿ ಹಿನ್ನಲೆಯಲ್ಲಿ ಮಾಧ್ಯಮದ ಮುಂದೆ ಸಚಿವ ಕೆ.ಜೆ ಜಾರ್ಜ್ ಗರಂ ಆದರು.

Add Asianetnews Kannada as a Preferred SourcegooglePreferred

ನೋಟಿಸ್ ಜಾರಿ ಹಿನ್ನಲೆಯಲ್ಲಿ ಮಾಧ್ಯಮದವರು ಸಚಿವರನ್ನು ಪ್ರಶ್ನೆ ಕೇಳಿದಾಗ, ನೀವು ನನ್ನ ಹತ್ತಿರ ಪ್ರಶ್ನೆ ಕೇಳಲೇ ಬಾರದು ಸಿ.ಬಿ.ಐ ನನ್ನನ್ನು ಕರೆಯಬಹುದು ಅಥವಾ ನನ್ನ ಪಿಎಸ್ ಕರೆಯಬಹುದು ಅದು ಸಿ.ಬಿ.ಐಗೆ ಬಿಟ್ಟ ವಿಚಾರ. ಅದೆಲ್ಲಾ ನಿಮಗೆ ಯಾಕೆ ? ಅದನ್ನೆಲ್ಲ ನೀವು ನನ್ನ ಬಳಿ ಕೇಳೊದೆ ತಪ್ಪು. ಕೇಳಬಾರದು. ಒಂದೊಂದನ್ನು ಬ್ರೇಕಿಂಗ್ ನ್ಯೂಸ್ ಮಾಡಬೇಕಾ? ವರದಿ ಬರುವವರೆಗೂ ಕಾಯಿರಿ. ವರದಿ ಬಂದ ಮೇಲೆ ಏನ್ ಸುದ್ದಿ ಹಾಕ್ತಿರಾ ನಿಮಗೆ ಬ್ರೇಕಿಂಗ್ ಸುದ್ದಿಗೋಸ್ಕರ ನನ್ನ ವಿಷಯ ತಗೊತಿರಿ. ನಿಮಗೆ ಬೇರೆ ವಿಷಯ ಇಲ್ಲವೆ ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.