ವಿಧಾನಸಭಾ ಚುನಾವಣೆಗೆ ರಾಜಧಾನಿಗೆ ಬಂದಿಳಿದಿದೆ ಯೋಧರ ತಂಡ
2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ. ನೆಲಮಂಗಲಕ್ಕೆ 95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ.
ಬೆಂಗಳೂರು (ಏ. 06): 2018 ರ ವಿಧಾನಸಭಾ ಚುನಾವಣೆಗೆ ಯೋಧರ ನಿಯೋಜನೆ ಮಾಡಲಾಗಿದೆ. ನೆಲಮಂಗಲಕ್ಕೆ 95 ಜನರ ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್ ತಂಡ ಆಗಮಿಸಿದೆ.
ಕಟ್ಟುನಿಟ್ಟಿನ ಚುನಾವಣೆ ನಡೆಸಲು ಸೇನಾ ಸಿಬ್ಬಂದಿ ಆಗಮಿಸಿದೆ. ಯೋಧರನ್ನು ನೆಲಮಂಗಲ ಪೊಲೀಸರು ಬರ ಮಾಡಿಕೊಂಡಿದ್ದಾರೆ. ಉತ್ತರ ಭಾರತದಿಂದ 1500 ಯೋಧರು ಆಗಮಿಸಿದ್ದಾರೆ. ವಿಶೇಷ ರೈಲಿನಲ್ಲಿ ನಗರದ ಕಾಡುಗುಡಿಗೆ ಆಗಮಿಸಿದ್ದಾರೆ.
ಈ ಭಾಗದ ಜಿಲ್ಲೆಗಳು ಮತ್ತು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ.