ಮೇಟಿಗೆ ಸಿಗಲಿದೆಯಾ ಟಿಕೆಟ್..? ಯಾವ ಕ್ಷೇತ್ರದಿಂದ ಸ್ಪರ್ಧೆ..?
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಇದ್ದು, ಪ್ರಭಾವಿಗಳ ಪುತ್ರರು ಒಂದೇ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿಗೆ ಮುಂದಾಗಿರುವ ಕ್ಷೇತ್ರಗಳ ಪಟ್ಟಿಗೆ ಈಗ ಮಲ್ಲೇಶ್ವರ ಸೇರ್ಪಡೆಯಾಗಿದೆ.
ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಇದ್ದು, ಪ್ರಭಾವಿಗಳ ಪುತ್ರರು ಒಂದೇ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿಗೆ ಮುಂದಾಗಿರುವ ಕ್ಷೇತ್ರಗಳ ಪಟ್ಟಿಗೆ ಈಗ ಮಲ್ಲೇಶ್ವರ ಸೇರ್ಪಡೆಯಾಗಿದೆ.
ಮಲ್ಲೇಶ್ವರ ಕ್ಷೇತ್ರದ ಟಿಕೆಟ್ಗಾಗಿ ಸಚಿವ ಎಂ.ಆರ್. ಸೀತಾರಾಂ ಅವರ ಪುತ್ರ ರಕ್ಷಾ ಸೀತಾರಾಂ ಹಾಗೂ ಕಳೆದ ಬಾರಿಯ ಅಭ್ಯರ್ಥಿ ಬಿ.ಕೆ. ಶಿವರಾಂ ಅವರ ಪುತ್ರ ರಕ್ಷಿತ್ ಶಿವರಾಂ ಅರ್ಜಿಯನ್ನು ಕೆಪಿಸಿಸಿ ಕಚೇರಿಯಿಂದ ಪಡೆದುಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಇದೇ ಕ್ಷೇತ್ರಕ್ಕೆ ಬಿ.ಕೆ. ಶಿವರಾಂ ಕೂಡ ಅರ್ಜಿ ಪಡೆದುಕೊಂಡಿದ್ದಾರೆ. ಇನ್ನು ಲೈಂಗಿಕ ಹಗರಣಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ಎಚ್.ವೈ. ಮೇಟಿ ಅವರು ಬಾಗಲಕೋಟೆ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.