(ವಿಡಿಯೊ) ಕಾವೇರಿ ಸಂಗಮದಲ್ಲಿ ಜಲಾ ಸಮಾಧಿಯಾಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ
(ವಿಡಿಯೊ) ಕಾವೇರಿ ಸಂಗಮದಲ್ಲಿ ಜಲಾ ಸಮಾಧಿಯಾಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ
ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ತೆಪ್ಪ ಮಗಚಿ ಜಲಾ ಸಮಾಧಿಯಾಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ ಮಾಡಿದ ಘಟನೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಕಾವೇರಿ ಸಂಗಮದಲ್ಲಿ ತೆಪ್ಪ ಮಗಚಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದ್ರೆ ಈ ವಿಷಯ ಬಹಿರಂಗಗೊಳಿಸದೆ ತಾಲೂಕು ಆಡಳಿತ, ಭದ್ರತೆಯ ನೆಪವೊಡ್ಡಿ ಸಂಗಮದಲ್ಲಿ ಕಾವೇರಿ ಪುಷ್ಕರ ಪುಣ್ಯಸ್ನಾನಕ್ಕೆ ನಿಷೇಧ ಹೇರಿದೆ.