ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ: ಬಿಜೆಪಿ ಮುಖಂಡ
ಗಾರೋ ಗುಡ್ಡಗಾಡು ಭಾಗದ ಮುಖಂಡರಾದ ಮರಾಕ್ ಇತ್ತೀಚೆಗೆ ನೀಡಿದ ಹೇಳಿಕೆಯು ಪಕ್ಷದ ತತ್ವಕ್ಕೆ ವಿರುದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮರಾಕ್, ‘ನಾನು ಓರ್ವ ಕ್ರೈಸ್ತ. ನನಗೆ ಗಾರೋ ಜನರು ಮುಖ್ಯ. ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ. ಈ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.
