ನನಗೂ ರಾಜ್ಯ ಮುಖ್ಯಮಂತ್ರಿ ಆಗೋ ಆಸೆ ಇದೆ. ಆದ್ರೆ ಯಾವುದೇ ದುರಾಸೆ ಇಲ್ಲ. ಹೀಗಂತ ಇಂಗಿತ ವ್ಯಕ್ತಪಡಿಸಿದ್ದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​.

ವಿಜಯಪುರ(ಜೂ.25): ನನಗೂ ರಾಜ್ಯ ಮುಖ್ಯಮಂತ್ರಿ ಆಗೋ ಆಸೆ ಇದೆ. ಆದ್ರೆ ಯಾವುದೇ ದುರಾಸೆ ಇಲ್ಲ. ಹೀಗಂತ ಇಂಗಿತ ವ್ಯಕ್ತಪಡಿಸಿದ್ದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​.

ವಿಜಯಪುರ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ನಡೆದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವಿ ಆಶೀರ್ವಾದಿಂದ ಜಲ ಸಂಪನ್ಮೂಲ ಸಚಿವನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಿಎಂ ಆಗುವ ಆಸೆ ಇದೆ ಅಂತ ಹೇಳಿದರು.

ಈ ಮೂಲಕ ಎಂ.ಬಿ. ಪಾಟೀಲ್​ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವುದು ಪಕ್ಕಾ ಆಗಿದೆ. ಇನ್ನು ಪಾಟೀಲರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.