ಪ್ರತ್ಯೇಕ ಲಿಂಗಾಯತ ಧರ್ಮ: ರಾಯರೆಡ್ಡಿ ಹೇಳಿಕೆಗೆ ಮಾತೆ ಮಹಾದೇವಿ ವಿರೋಧ
ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.
ಹುನಗುಂದ: ವೀರಶೈವ- ಲಿಂಗಾಯತ ಪ್ರಯೋಗದಲ್ಲಿ ಅನೇಕರು ಶೈವ ಪದವನ್ನು ಇಷ್ಟಪಡುವುದಿಲ್ಲ ಆದ್ದರಿಂದ ಶೈವ ಪದ ತೆಗೆದು ವೀರ- ಲಿಂಗಾಯತ ಎಂದು ಮಾಡಿ ಸ್ವತಂತ್ರ ಧರ್ಮದ ಮಾನ್ಯತೆಗೆ ಯತ್ನಿಸಬೇಕು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ವಿರೋಧಿಸಿದ್ದಾರೆ.
ಈ ಧರ್ಮ ಸ್ಥಾಪನೆಯಾಗಿ 900 ವರ್ಷಗಳಾಗಿವೆ. ಇದು ವೀರಶೈವ ಲಿಂಗಾಯತವೂ ಅಲ್ಲ, ವೀರ ಲಿಂಗಾಯತವೂ ಅಲ್ಲ, ಕೇವಲ ಲಿಂಗಾಯತ ಮಾತ್ರ. ಆದ್ದರಿಂದ ಹೊಸ ಶಬ್ದಗಳ ಪ್ರಯೋಗ ಸಮಂಜಸವಲ್ಲ ಎಂದಿದ್ದಾರೆ.