Asianet Suvarna News Asianet Suvarna News

ಸ್ವಚ್ಛ ಭಾರತ ಯೋಜನೆಗೆ ಮಂತ್ರಾಲಯದ ರಾಯರ ಮಠ ಸೇರಿ 10 ಸ್ಥಳ ಆಯ್ಕೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಯೋಜನೆ’ಯ ಮೂರನೇ ಹಂತದ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಂದಿರ ಸೇರಿದಂತೆ ಒಟ್ಟು 10 ಸಾಂಪ್ರದಾಯಿಕ ಕ್ಷೇತ್ರಗಳು ಆಯ್ಕೆಯಾಗಿವೆ.  

Mantralaya Selected to Svaccha Bharath Campaign

ನವದೆಹಲಿ (ಜೂ. 13): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಯೋಜನೆ’ಯ ಮೂರನೇ ಹಂತದ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಂದಿರ ಸೇರಿದಂತೆ ಒಟ್ಟು 10 ಸಾಂಪ್ರದಾಯಿಕ ಕ್ಷೇತ್ರಗಳು ಆಯ್ಕೆಯಾಗಿವೆ. 

ಈ ಮೂಲಕ ಈಗಾಗಲೇ ಸ್ವಚ್ಛ ಭಾರತದ 1 ಮತ್ತು 2ನೇ ಹಂತದಲ್ಲಿ ನೈರ್ಮಲ್ಯೀಕರಣಕ್ಕೆ ಒಳಗಾಗುತ್ತಿರುವ 20 ಸಾಂಪ್ರದಾಯಿಕ ಪ್ರದೇಶಗಳ ಪಟ್ಟಿಗೆ ಈ ಸಾಂಪ್ರದಾಯಿಕ ಕ್ಷೇತ್ರಗಳು ಸಹ ಸೇರ್ಪಡೆಯಾಗಿವೆ. ಸ್ವಚ್ಛ ಭಾರತದ ಮೂರನೇ ಹಂತದ ಯೋಜನೆಗೆ ಕೇರಳದ ಶಬರಿ ಮಲೆ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಹಜದ್ರ್ವಾರಿ ಪ್ಯಾಲೇಸ್‌, ಹರ್ಯಾಣದ ಕುರುಕ್ಷೇತ್ರದ ಬ್ರಹ್ಮ ಸರೋವರ ಮಂದಿರ, ಉತ್ತರ ಪ್ರದೇಶದ ವಿದೂರ್‌ ಕುಟಿ, ಉತ್ತರಾಖಂಡ್‌ನ ಮನ ಗ್ರಾಮ, ಜಮ್ಮು-ಕಾಶ್ಮೀರದ ಪಾಂಗಾಂಗ್‌ ಕೆರೆ, ಉತ್ತರ ಪ್ರದೇಶದ ನಾಗವಸುಕಿ ಮಂದಿರ, ಮಣಿಪುರದ ಇಮಾ ಕೀಥಲ್‌ ಮಾರ್ಕೆಟ್‌ ಮತ್ತು ಉತ್ತರಾಖಂಡ್‌ನ ಕನ್ವಾಶ್ರಮಗಳು ಆಯ್ಕೆಯಾಗಿವೆ.

Follow Us:
Download App:
  • android
  • ios