ಆತ್ಮಹತ್ಯೆಗೆ ಪ್ರಚೋದಿಸುವವರು ನಮ್ಮ ರಾಜ್ಯದಲ್ಲೂ ಇದ್ದಾರೆ ಹುಷಾರ್!
ಮೋಕ್ಷ ಸಿಗುತ್ತದೆ ಎಂದು ದೆಹಲಿಯಲ್ಲಿ ಒಂದೇ ಕುಟುಂಬದ 11 ಜನರು ಎಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.. ಅದು ನಮ್ಮ ರಾಜ್ಯದಲ್ಲೇ!
ಮಂಡ್ಯ[ಜು.8] ದೆಹಲಿಯ ಬುರಾರಿಯಲ್ಲಿ ಭಾಟಿಯಾ ಕುಟುಂಬದ ನಿಗೂಢ ಸಾವಿನ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಮಂಡ್ಯದಲ್ಲಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋಸಿದ ಪ್ರಕರಣ ವರದಿಯಾಗಿದೆ.
ಮಂಡ್ಯ ತಾಲೂಕಿನ ಮಾರಗೊಂಡನಹಳ್ಳಿಯ ಅನಿತಾ ಎಂಬುವವರಿಗೆ ತೃತೀಯ ಲಿಂಗಿಯೊಬ್ಬರು ಪ್ರಚೋದನೆ ನೀಡಿದ್ದಾರೆ. ನೀನು ಸತ್ತರೆ ನಿನ್ನ ಸಾವಿನಿಂದ ಮಕ್ಕಳಿಗೆ ಮೋಕ್ಷ ಸಿಗುತ್ತದೆ ಎಂದು ಹೇಳಿದ್ದಾರೆ. ಅನಿತಾ ಆಘಾತಕಾರಿ ಅಂಶವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ವೃತ್ತಿಯಲ್ಲಿ ಟೈಲರ್ ಆಗಿರುವ ಅನಿತಾ ಮತ್ತು ಅವರ ಪತಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ವಾಸವಾಗಿದ್ದಾರೆ. ನೀನು ನೇಣು ಹಾಕಿಕೊಂಡರೆ ಮಕ್ಕಳಿಗೆ ಮುಕ್ತಿ ಮತ್ತು ಮೋಕ್ಷ ಸಿಗುತ್ತದೆ ಎಂದು ತೃತೀಯ ಲಿಂಗಿ ಮಾಂತ್ರಿಕನೊಬ್ಬ ಪ್ರಚೋದನೆ ನೀಡಿದ್ದ.