ಪಾನಮತ್ತ ವ್ಯಕ್ತಿಯೊಬ್ಬ ಸ್ವಂತ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಬಗೆದು, ಅದನ್ನು ಚಟ್ನಿ ಮತ್ತು  ಕಾಳು ಮೆಣಸು ಬಳಸಿಕೊಂಡು ತಿಂದಿರುವವನೆನ್ನಲಾದ ಅಮಾನವೀಯ ಘಟನೆ  ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

ಪುಣೆ: ಪಾನಮತ್ತ ವ್ಯಕ್ತಿಯೊಬ್ಬ ಸ್ವಂತ ತಾಯಿಯನ್ನೇ ಕೊಂದು, ಆಕೆಯ ಹೃದಯವನ್ನು ಬಗೆದು, ಅದನ್ನು ಚಟ್ನಿ ಮತ್ತು ಕಾಳು ಮೆಣಸು ಬಳಸಿಕೊಂಡು ತಿಂದಿರುವವನೆನ್ನಲಾದ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ರಕ್ತಸಿಕ್ತ ಕೈಗಳೊಂದಿಗೆ ಮನೆಯಿಂದ ಹೊರಹೋಗಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಸುನೀಲ್ ಕುಚಕುರ್ನಿ ಈ ಕೃತ್ಯ ಎಸಗಿದ ಆರೋಪಿ. ಮೃತ ಮಹಿಳೆಯನ್ನು ಯಲ್ಲವ್ವ ಎಂದು ಗುರುತಿಸಲಾಗಿದೆ.

ಸುನೀಲ್ ಕಾರ್ಮಿಕನಾಗಿದ್ದು, ಮದುವೆಯಾಗಿ 3 ಮಕ್ಕಳನ್ನು ಹೊಂದಿದ್ದಾನೆ. ಆತನ ಪತ್ನಿ ಮುಂಬೈಯಲ್ಲಿ ಹೆತ್ತವರ ಮನೆಯಲ್ಲಿದ್ದಾಳೆ. ಘಟನೆಯ ದಿನ, ಸುನೀಲ್ ಕುಡಿದು ಬಂದು ತಾಯಿಯ ಬಳಿ ಆಹಾರ ಕೇಳಿದ್ದಾನೆ. ಈ ವೇಳೆ ಇಬ್ಬರಿಗೂ ಜಗಳವಾಗಿದೆ. ಕೋಪದ ಭರದಲ್ಲಿ ತಾಯಿಗೇ ಇರಿದಿದ್ದಾನೆ. ಬಳಿಕ ಆಕೆಯೆ ಹೃದಯವನ್ನು ಬಗೆದು, ಅದಕ್ಕೆ ಚಟ್ನಿ ಮತ್ತು ಕಾಳುಮೆಣಸಿನ ಪುಡಿ ಹಾಕಿ ತಿಂದಿದ್ದಾನೆ.