ಮೈಸೂರಿನ ಕಕರವಾಡಿ ನಿವಾಸಿ 28 ವರ್ಷದ ಅಜ್ಮತ್​ ಖಾನ್​ ಜ್ಯೋತಿಷಿಯಿಂದ ವಂಚನೆಗೆ ಒಳಗಾದ ಯುವಕ. ಈತ ತನ್ನ ಏರಿಯಾದಲ್ಲಿ ವಾಸವಿದ್ದ  ವಿವಾಹಿತೆಯೊಬ್ಬಳನ್ನು ಪ್ರೀತಿಸಿ ಆಕೆಯನ್ನು ವಶೀಕರಣ ಮಾಡಿಕೊಡುವಂತೆ ಮೈಸೂರಿನ ನಂಜೂಮಳಿಗೆ ಬಳಿ ಇರುವ ಬಾಬಾ ಕರೀಮ್​ ಖಾನ್​ ಬಳಿ ತೆರಳಿದ್ದ. ಯುವಕನ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡ ಆರೋಪಿ ಜ್ಯೋತಿಷಿ ’ಬಾಬಾ ಖಬೀರ್​’ ಅಜ್ಮತ್​ ಖಾನ್​ಗೆ ತಾನು ಇಷ್ಟ ಪಡುವ ಮಹಿಳೆಯನ್ನು ವಶೀಕರಣ ಮಾಡಿಕೊಡುವುದಾಗಿ ತಿಳಿಸಿ ಅದಕ್ಕಾಗಿ  250ಗ್ರಾಂ ಚಿನ್ನ, 250ಗ್ರಾಂ ಬೆಳ್ಳಿ, 250ಗ್ರಾಂ ತಾಮ್ರ ಸೇರಿದಂತೆ 5 ಬಗೆಯ ಲೋಹಗಳನ್ನು ತರಲು ಹೇಳಿದ್ದಾನೆ. ನಂತರ ತನ್ನ ಕಚೇರಿಯಲ್ಲಿ ವಶೀಕರಣ ಪೂಜೆ ಮಾಡಿದಂತೆ ನಟಿಸಿ, ಎಲ್ಲವನ್ನು ಪ್ರತ್ಯೇಕವಾಗಿ ಕೆಪ್ಪು ಬಟ್ಟೆಯಲ್ಲಿ ಕಟ್ಟಿ ಕಳುಹಿಸಿದ್ದಾನೆ. ನೀನು ಮನೆಗೆ ಹೋಗಿ ಬಟ್ಟೆ ಗಂಟು ಬಿಚ್ಚಿ ನೋಡಿ. ನಂತರ ನೀನು ಬಯಸಿದ ಮಹಿಳೆ ನಿನಗೆ ವಶೀಕರಣವಾಗುತ್ತಾಳೆ ಎಂದು ವಂಚಿಸಿ ಕಳುಹಿಸಿದ್ದಾನೆ.

ಮೈಸೂರು(ನ.25): ವಿವಾಹಿತೆಯನ್ನು ವಶೀಕರಣ ಮಾಡಿಕೊಳ್ಳಲು ಮುಂದಾಗಿದ್ದ ಯುಕನಿಗೆ ಜ್ಯೋತಿಷಿಯೋಬ್ಬ ಚಿನ್ನ ಬೆಳ್ಳಿ ಸೇರಿದಂತೆ 8 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆಸಿದೆ.

Add Asianetnews Kannada as a Preferred SourcegooglePreferred

ಮೈಸೂರಿನ ಕಕರವಾಡಿ ನಿವಾಸಿ 28 ವರ್ಷದ ಅಜ್ಮತ್​ ಖಾನ್​ ಜ್ಯೋತಿಷಿಯಿಂದ ವಂಚನೆಗೆ ಒಳಗಾದ ಯುವಕ. ಈತ ತನ್ನ ಏರಿಯಾದಲ್ಲಿ ವಾಸವಿದ್ದ ವಿವಾಹಿತೆಯೊಬ್ಬಳನ್ನು ಪ್ರೀತಿಸಿ ಆಕೆಯನ್ನು ವಶೀಕರಣ ಮಾಡಿಕೊಡುವಂತೆ ಮೈಸೂರಿನ ನಂಜೂಮಳಿಗೆ ಬಳಿ ಇರುವ ಬಾಬಾ ಕರೀಮ್​ ಖಾನ್​ ಬಳಿ ತೆರಳಿದ್ದ. ಯುವಕನ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡ ಆರೋಪಿ ಜ್ಯೋತಿಷಿ ’ಬಾಬಾ ಖಬೀರ್​’ ಅಜ್ಮತ್​ ಖಾನ್​ಗೆ ತಾನು ಇಷ್ಟ ಪಡುವ ಮಹಿಳೆಯನ್ನು ವಶೀಕರಣ ಮಾಡಿಕೊಡುವುದಾಗಿ ತಿಳಿಸಿ ಅದಕ್ಕಾಗಿ 250ಗ್ರಾಂ ಚಿನ್ನ, 250ಗ್ರಾಂ ಬೆಳ್ಳಿ, 250ಗ್ರಾಂ ತಾಮ್ರ ಸೇರಿದಂತೆ 5 ಬಗೆಯ ಲೋಹಗಳನ್ನು ತರಲು ಹೇಳಿದ್ದಾನೆ. ನಂತರ ತನ್ನ ಕಚೇರಿಯಲ್ಲಿ ವಶೀಕರಣ ಪೂಜೆ ಮಾಡಿದಂತೆ ನಟಿಸಿ, ಎಲ್ಲವನ್ನು ಪ್ರತ್ಯೇಕವಾಗಿ ಕೆಪ್ಪು ಬಟ್ಟೆಯಲ್ಲಿ ಕಟ್ಟಿ ಕಳುಹಿಸಿದ್ದಾನೆ. ನೀನು ಮನೆಗೆ ಹೋಗಿ ಬಟ್ಟೆ ಗಂಟು ಬಿಚ್ಚಿ ನೋಡಿ. ನಂತರ ನೀನು ಬಯಸಿದ ಮಹಿಳೆ ನಿನಗೆ ವಶೀಕರಣವಾಗುತ್ತಾಳೆ ಎಂದು ವಂಚಿಸಿ ಕಳುಹಿಸಿದ್ದಾನೆ.

ಅದರಂತೆ ಮನೆಗೆ ತೆರಳಿ ಗಂಟು ಬಿಚ್ಚಿದಾಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸತಿಪತಿ ಕಲಹ, ಪ್ರೇಮ ವಿವಾಹ, ಮಹಿಳಾ ವಶೀಕರಣ, ಇಂತಹ ಯಾವುದೇ ಸಮಸ್ಯೆ ಇದ್ದರೂ ಏಳೇ ದಿನದಲ್ಲಿ ಪರಿಹಾರ ಮಾಡಿಕೊಡುವುದಾಗಿ ಜಾಹೀರಾತು ನೀಡಿಲಾಗಿತ್ತು. ಇದನ್ನು ಗಮನಿಸಿದ ಅಜ್ಮತ್​ ಖಾನ್​, ಬಾಬಾ ಕಬೀರ್​ಗೆ ಫೋನ್​ ಮಾಡಿ ಮೋಸ ಹೋಗಿದ್ದಾನೆ.

ಸದ್ಯ ಆರೋಪಿ ಬಾಬಾ ಖಬೀರ್​ ವಿರುದ್ಧ ಕೆಆರ್​.ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.