ವರುಣನ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಗೊಂಡಿವೆ. ಭಾರತದ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರ ಮನೆಗೂ ಇದರ ಬಿಸಿ ತಟ್ಟಿದೆ. ಭೂಪತಿ ಅವರ ಮನೆಯ ಮುಖ್ಯದ್ವಾರದ ಮುಖಾಂತರ ಮಳೆ ನೀರು ಮನೆಯೊಳಗೆ ನುಗ್ಗುತ್ತಿದ್ದು, ಇದನ್ನು ತಡೆಯಲು ಅವರ ಪತ್ನಿ  ಲಾರಾ ದತ್ತಾ ಮಾಡಿರುವ ಉಪಾಯ ಭಾರೀ ಸದ್ದು ಮಾಡಿದೆ.

ಮುಂಬೈ: ವರುಣನ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಗೊಂಡಿವೆ.

ಭಾರತದ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರ ಮನೆಗೂ ಇದರ ಬಿಸಿ ತಟ್ಟಿದೆ. ಭೂಪತಿ ಅವರ ಮನೆಯ ಮುಖ್ಯದ್ವಾರದ ಮುಖಾಂತರ ಮಳೆ ನೀರು ಮನೆಯೊಳಗೆ ನುಗ್ಗುತ್ತಿದ್ದು, ಇದನ್ನು ತಡೆಯಲು ಅವರ ಪತ್ನಿ ಲಾರಾ ದತ್ತಾ ಮಾಡಿರುವ ಉಪಾಯ ಭಾರೀ ಸದ್ದು ಮಾಡಿದೆ.

Scroll to load tweet…

ವಿಂಬಲ್ಡನ್, ಆಸ್ಟ್ರೇಲಿಯಾ ಹಾಗೂ ಫ್ರೆಂಚ್ ಓಪನ್’ಗಳಲ್ಲಿ ಮಹೇಶ್ ಬಳಸಿದ ಟವೆಲ್’ಗಳನ್ನು ಮನೆಯ ದ್ವಾರದ ಬಾಗಿಲಿಗೆ ಲಾರಾ ಅಡ್ಡ ಇರಿಸಿದ್ದು, ಫೋಟೊವನ್ನು ಟ್ವೀಟ್ ಆಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ ಸಿಟ್ಟಾಗಿದ್ದು, ಟ್ವೀಟರ್’ನಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

Scroll to load tweet…