Asianet Suvarna News Asianet Suvarna News

ರೈತರಿಗೆ ಸಿಕ್ಕಿತು ಕೇಂದ್ರ ಸರ್ಕಾರದ ಅಭಯ

ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 
 

Mahadayi Problem Solved Soon Says Gadkari

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಯಾದ ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ  ಚರ್ಚಿಸಲು ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಾಜಧಾನಿ ದೆಹಲಿಗೆ ತೆರಳಿದ್ದ 23 ಜನರ ರೈತರ ನಿಯೋಗ ಭಾನುವಾರ ಹುಬ್ಬಳ್ಳಿಗೆ ಆಗಮಿಸಿತು. 

ಈ ಸಂದರ್ಭದಲ್ಲಿ ಭೇಟಿಯ ವಿವರ ನೀಡಿದ ರೈತ ಮುಖಂಡ ಶಂಕ್ರಪ್ಪ ಅಂಬಲಿ, ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಪ್ರಧಾನಿ ಅವರ ಪರವಾಗಿ ಗಡ್ಕರಿ ಅವರು ನಿಯೋಗದೊಂದಿಗೆ ಚರ್ಚೆ ಮಾಡಿ ಈ ಭರವಸೆ ನೀಡಿದರು ಎಂದರು. ಜುಲೈ 21ರಂದು ಮಹದಾಯಿ ಯೋಜನೆ ಅನುಷ್ಠಾನದ ಕುರಿತು ನ್ಯಾಯಾಧಿಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದ್ದು, ಗಡ್ಕರಿ ಭರವಸೆ ಮಹತ್ವ ಪಡೆದಿದೆ.

ವರದಿ ಸಲ್ಲಿಕೆ: ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಭೇಟಿ ಸಂದರ್ಭದಲ್ಲಿ ನಿಯೋಗದಿಂದ ಅವರಿಗೆ 9 ಸಾವಿರ ಕೋಟಿ ವೆಚ್ಚದ 9 ತಾಲೂಕಿನ ಸಣ್ಣ ನೀರಾವರಿ ಯೋಜನೆಯ ವರದಿ ಸಲ್ಲಿಸಿದ್ದೇವೆ. ಮಹದಾಯಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತವಾಗಿದೆ ಎಂದರು.

Follow Us:
Download App:
  • android
  • ios