Asianet Suvarna News Asianet Suvarna News

ದಿಗ್ವಿಜಯ್ ಸಿಂಗ್ 'ಉಗ್ರ' ಹೇಳಿಕೆ ಕಾಂಗ್ರೆಸ್‌ಗೆ ತಿರುಗುಬಾಣವಾಯ್ತೆ?

ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿ ಪರಿಗಣಿಸುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಆರ್ಎಸ್ಎಸ್ ಮತ್ತು ಹಿಂದುಗಳ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದು ಚುನಾವಣೆ ಹೊಸ್ತಿಲ್ಲಿರುವ ಪಕ್ಷಕ್ಕೆ ತಿರುಗುಬಾಣವಾಗುತ್ತಿದೆ. ಹಾಗಾದರೆ ಕಾಂಗ್ರೆಸ್ ನಾಯಕನೆ ಕಾಂಗ್ರೆಸ್ ಗೆ ಮಾರಕವಾಗಿದ್ದಾರೆ.. ಈ ಸುದ್ದಿ ಓದಿ..

Madhya Pradesh Election: Congress stung by Digvijaya Singh's 'Hindu terror' barb

ಭೋಪಾಲ್ ಜೂನ್ 20:  ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿ ಪರಿಗಣಿಸುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಆರ್ಎಸ್ಎಸ್ ಮತ್ತು ಹಿಂದುಗಳ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದು ಚುನಾವಣೆ ಹೊಸ್ತಿಲ್ಲಿರುವ ಪಕ್ಷಕ್ಕೆ ತಿರುಗುಬಾಣವಾಗುತ್ತಿದೆ.

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು ದಿಗ್ವಿಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಕೋ ಆರ್ಡಿನೇಶನ್ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡುವ ಉದ್ದೇಶದಿಂದ ಚುನಾವಣೆ 5 ತಿಂಗಳು ಇರುವಾಗಲೆ ಏಕತಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಶನಿವಾರ ವರದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ನಾನು ಹಿಂದೂಗಳನ್ನು ಉಗ್ರರೆಂದು ಕರೆದಿಲ್ಲ ಸಂಘದ ಸಿದ್ಧಾಂತಗಳು ಉಗ್ರವಾದಕ್ಕೆ ಪ್ರೇರಣೆ ನೀಡುವಂತಿವೆ ಎಂದು ಹೇಳಿದ್ದರು.

ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ದಿಗ್ವಿಜಯ್ ಸಿಂಗ್ ಅವರು, ಮಲೆಗಾಂವ್ ಸ್ಫೋಟವಾಗಲೀ, ಮೆಕ್ಕಾ ಮಸೀದಿ ಸ್ಫೋಟವಾಗಲೀ ಅಥವಾ ದರ್ಘಾ ಶರೀಫ್ ಸ್ಫೋಟವಾಗಲೀ ಯಾವುದೇ ಸ್ಫೋಟವಾದರೂ, ಅದನ್ನು ಸಂಘ ಪರಿವಾರಗಳ ಸಿದ್ಧಾಂತಗಳಿಂದ ಪ್ರೇರಿತರಾದ ಜನರು ಮಾಡಿದ್ದಾರೆ ಎಂದಿದ್ದರು. ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Latest Videos
Follow Us:
Download App:
  • android
  • ios