ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಎಂ ಬಿ ಪಾಟೀಲ್ ರಾಜಿನಾಮೆ?
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಸಿಟ್ಟಿಗೆದ್ದಿರುವ ಎಂ ಬಿ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಂ ಬಿ ಪಾಟೀಲ್ ರಾಜಿನಾಮೆ ನಿರ್ಧಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು (ಜೂ. 06): ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಸಿಟ್ಟಿಗೆದ್ದಿರುವ ಎಂ ಬಿ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಂ ಬಿ ಪಾಟೀಲ್ ರಾಜಿನಾಮೆ ನಿರ್ಧಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ರಾಜಕೀಯ ವಿರೋಧಿ ವಿಜಯಪುರದ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್’ಗೆ ಸಚಿವ ಸ್ಥಾನ ನೀಡಿ, ತಮಗೆ ನೀಡಿಲ್ಲವೆಂದು ಪಾಟೀಲ್ ಅಸಮಾಧಾನಗೊಂಡಿದ್ದಾರೆ. ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂ ಬಿ ಪಾಟೀಲ್ ರಾಜಿನಾಮೆ ನೀಡಲು ಸ್ಪೀಕರ್’ಗೆ ಸಮಯಾವಕಾಶ ಕೇಳಿದ್ದಾರೆ.