Asianet Suvarna News Asianet Suvarna News

ಭಕ್ತರ ಗಮನಕ್ಕೆ : ಉಡುಪಿ, ಕುಕ್ಕೆಯಲ್ಲಿ ದೇವರ ದರ್ಶನ ಸ್ಥಗಿತ

ಉಡುಪಿ ಮತ್ತು ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಚಂದ್ರಗ್ರಹಣದ ಪ್ರಯುಕ್ತ ಪೂಜೆ ಹಾಗೂ ದರ್ಶನ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. 

Lunar Eclipse No Pooja At Udupi And Kukke
Author
Bengaluru, First Published Jul 26, 2018, 10:16 AM IST

ಬೆಂಗಳೂರು: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ, ದರ್ಶನಗಳ ಸಮಯಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ ಎಂದು ದೇವಸ್ಥಾನಗಳ ಆಡಳಿತ ಮಂಡಳಿಗಳು ತಿಳಿಸಿವೆ. ಮಂತ್ರಾಲಯದಲ್ಲಿ ಗ್ರಹಣದ 7, 8 ಗಂಟೆಗಳ ಮುಂಚೆ ಮಠದ ಪೂಜೆ ಸ್ಥಗಿತಗೊಳ್ಳಲಿದ್ದು, ಗ್ರಹಣ ದೋಷ ರಾಶಿಗಳ ಹೋಮ ಹವನ ನೆರವೇರಿಸಲಾಗುವುದು. 

ಕುಕ್ಕೆಸುಬ್ರಹ್ಮಣ್ಯ  ದಲ್ಲಿ ರಾತ್ರಿ 7 ರ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸಂಜೆ ಆಶ್ಲೇಷ ಬಲಿ ನೆರವೇರುವುದಿಲ್ಲ. ರಾತ್ರಿ ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಕೊಲ್ಲೂರು ದೇವಸ್ಥಾನದಲ್ಲಿ ರಾತ್ರಿ ಭಕ್ತರಿಗೆ ಊಟ ಇಲ್ಲ. ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಜೆ 6 ರೊಳಗೆ ಪೂಜೆ ಮುಕ್ತಾಯವಾಗಲಿದೆ.

Follow Us:
Download App:
  • android
  • ios