ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ (ಜ.03): ಸರ್ಕಾರ ಅಥವಾ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಧರ್ಮ ವಿಘಟನೆಗೆ ಕಾರಣವಾದರೆ ಚುನಾವಣೆಯಲ್ಲಿ ಧರ್ಮ ಯುದ್ಧ ಸಾರಬೇಕಾಗುತ್ತದೆ ದಾವಣಗೆರೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ದಾವಣಗೆರೆಯ ರೇಣುಕಾಮಂದಿರದಲ್ಲಿ ರಂಭಾಪುರಿ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಧರ್ಮ ಬೆಂಬಲಿತ ಸ್ವಾಮೀಜಿಗಳಿಂದ ಸಭೆ ನಡೆದಿದೆ.

ಸರ್ಕಾರವೇ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಸೌಲಭ್ಯಗಳ ಆಮಿಷವೊಡ್ಡಿ ಲಿಂಗಾಯತ ಸಮಾಜವನ್ನು ಒಡೆಯುತ್ತಿದೆ. ಸರ್ಕಾರದಲ್ಲಿರುವವರೇ ಈ ಕೃತ್ಯಕ್ಕೆ ಹಾಕಿದ್ದಾರೆ. ಹೀಗಾಗಿ, ಸರ್ಕಾರವೇ ನಮ್ಮ ಟಾರ್ಗೆಟ್ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

* ಲಿಂಗಾಯತ ಧರ್ಮ ಹೋರಾಟ ಸಮಿತಿ ಕರೆ ನೀಡಿದ್ದ ಚರ್ಚೆಗೆ ಸ್ವಾಗತ ನೀಡಲು ತೀರ್ಮಾನ

* ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಫೆಬ್ರವರಿ 1 ರಂದು ಸಭೆ ನಡೆಸಬೇಕೆಂದು ಮನವಿ

* ಎರಡೂ ಕಡೆಯಿಂದ 7 ಮಂದಿ ಭಾಗವಹಿಸಬೇಕು. ವಿಡಿಯೋ ಚಿತ್ರೀಕರಣ ಮಾಡಬೇಕು. ವ್ಯಕ್ತಿಗತ ಆರೋಪ ಮಾಡುವಂತಿಲ್ಲ.

* ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರಕ್ಕೆ ಸಲ್ಲಿಸಿದ್ದ 3 ಮನವಿ ತಿರಸ್ಕ್ರತಗೊಂಡ ಬಗ್ಗೆ ಆದೇಶ ಪ್ರತಿ ಬಹಿರಂಗಪಡಿಸಬೇಕು..

* ಲಿಂಗಾಯತ ಪದಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗೆ ಸರ್ಕಾರದಿಂದ ಒಪ್ಪಿಗೆ ಇದ್ದರೆ ಬಹಿರಂಗಪಡಿಸಬೇಕು.