ಯುಪಿಯಲ್ಲಿ ಸಿಡಿಲಿಗೆ 32 ಮಂದಿ ಬಲಿ: ಮೃತರಿಗೆ 4 ಲಕ್ಷ ರು. ಪರಿಹಾರ
ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 32ಕ್ಕೂ ಹೆಚ್ಚು ಮಂದಿ ಬಲಿ| ಮೃತರ ಕುಟುಂಬಕ್ಕೆ 4 ಲಕ್ಷ ರು.
ಲಖನೌ[ಜ.22]: ಉತ್ತರ ಭಾರತದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜನಜೀವನ ತತ್ತರಗೊಂಡಿರುವ ಬೆನ್ನಲ್ಲೇ, ಸಿಡಿಲು ಬಡಿದು 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಸಿಡಿಲಿಗೆ ಇತರೆ 13 ಮಂದಿ ಗಾಯಗೊಂಡಿದ್ದಾರೆ.
ಕಾನ್ಪುರ ಹಾಗೂ ಫತೇಪುರದಲ್ಲಿ ತಲಾ 7 ಮಂದಿ, ಝಾನ್ಸಿಯಲ್ಲಿ 5, ಜಲೌನ್ನಲ್ಲಿ 4, ಹಮೀರ್ಪುರದಲ್ಲಿ 3, ಗಾಜಿಪುರದಲ್ಲಿ ಇಬ್ಬರು ಹಾಗೂ ಜಾನ್ಪುರ, ಪ್ರತಾಪ್ಗಢ, ಕಾನ್ಪುರ ದೆಹಾತ್ ಮತ್ತು ಚಿತ್ರಕೂಟದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಸಂತಾಪ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.