. ಚುನಾವಣಾ ಗುರುತಿನ ಚೀಟಿ, ಆಧಾರ್​, ಡ್ರೈವಿಂಗ್ ಲೈಸೆನ್ಸ್​, ಪಾಸ್​​ಪೋರ್ಟ್​, ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ, ಕೆಎಸ್'ಆರ್ಟಿಸಿ ವಿತರಿಸುವ ಗುರುತಿನ ಚೀಟಿ ತೋರಿಸಿ ಟಿಕೆಟ್​ ಪಡೆದು ಪ್ರಯಾಣಿಸಬಹುದು.

ಬೆಂಗಳೂರು(ಫೆ.22): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ವೇಗದೂತ, ರಾಜಹಂಸ, ಸುವಿಹಾರಿ ಬಸ್​​ಗಳಲ್ಲಿ ಹಿರಿಯರು ಶೇ.25 ರಷ್ಟು ರಿಯಾಯಿತಿ ದರಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು. ಚುನಾವಣಾ ಗುರುತಿನ ಚೀಟಿ, ಆಧಾರ್​, ಡ್ರೈವಿಂಗ್ ಲೈಸೆನ್ಸ್​, ಪಾಸ್​​ಪೋರ್ಟ್​, ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ, ಕೆಎಸ್'ಆರ್ಟಿಸಿ ವಿತರಿಸುವ ಗುರುತಿನ ಚೀಟಿ ತೋರಿಸಿ ಟಿಕೆಟ್​ ಪಡೆದು ಪ್ರಯಾಣಿಸಬಹುದು. ಈ ಯೋಜನೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ವಯವಾಗಲಿದೆ.