ನಾನು ನಿಮ್ಮ ಆಸ್ತಿ - ಹಾಳು ಮಾಡದಿರಿ : KSRTC ಬಸ್ ಮನವಿ
ಸುಟ್ಟ ಬಸ್ಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಟ್ಟು ಸಾವರ್ಜನಿಕರಲ್ಲಿ ಜಾಗ್ರತಿ ಮೂಡಿಸಲಾಗುತ್ತಿದೆ.
ಬೆಂಗಳೂರು [ಸೆ.14]: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಕಳೆದ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಒಕ್ಕಲಿಗರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು.
ಕನಕಪುರ ಹಾಗೂ ರಾಮನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಹಲವು ಸರ್ಕಾರಿ ಬಸ್ಸುಗಳನ್ನು ಸುಡಲಾಗಿತ್ತು.
ಈ ಸುಟ್ಟ ಬಸ್ಸುಗಳನ್ನು ಇದೀಗ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಮ್ಮ ತೆರಿಗೆ ಹಣದಲ್ಲಿ ಕೊಂಡ ಬಸ್ಸುಗಳನ್ನು ನೀವೇ ಸುಟ್ಟಾಗ ನಿಮ್ಮ ದುಡ್ಡನ್ನೇ ಹಾಳು ಮಾಡಿದಂತೆ ಎಂದು ಭಿತ್ತಿಪತ್ರಗಳನ್ನು ಅರಿವು ಮೂಡಿಸಲಾಗುತ್ತಿದೆ.