ಈ ಪ್ರತಿಷ್ಠಿತ ಶಾಲೆಯಲ್ಲಿ ಸೀಟು ಬೇಕಂದ್ರೆ ಪ್ರಾಂಶುಪಾಲರಿಗೆ 5 ಬಾಟಲ್ ಎಣ್ಣೆ ಕೊಡಬೇಕಂತೆ!
ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ. ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ.
ಬೆಂಗಳೂರು (ಮೇ. 22): ಕೇಂದ್ರೀಯ ವಿದ್ಯಾಲಯ ಸ್ಕೂಲ್ ನಲ್ಲಿ ಸೀಟ್ ನೀಡಲು ಪ್ರಾಂಶುಪಾಲರು 5 ಬಾಟೆಲ್ ಎಣ್ಣೆ ಕೇಳಿದ್ದಾರೆ.
ಕೇಂದ್ರಿಯ ವಿದ್ಯಾಲಯ 1 ರ ಹುಬ್ಬಳ್ಳಿ ವಿಭಾಗದ ಪ್ರಾಂಶುಪಾಲ ಸಿದ್ದಾರೂಢ್ ಟಿ ಮೇತ್ರಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಬಸವರಾಜ್ ಪುಜಾರ್ ಎಂಬುವವರು ದೂರು ನೀಡಿದ್ದಾರೆ. ವಿಧ್ಯಾರ್ಥಿಗೆ ಸೀಟ್ ನೀಡಲು ಹಣ ಮತ್ತು ಮಧ್ಯಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಅರೋಪ ಕೇಳಿ ಬಂದಿದೆ. 50 ಸಾವಿರ ನಗದು ಮತ್ತು 5 ಸಿಎಸ್ಡಿ ಕ್ಯಾಂಟೀನ್ ಎಣ್ಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು
ಬಸವರಾಜ್ ತಮ್ಮ ಮಗನ ನಾಲ್ಕನೇ ತರಗತಿಗೆ ಸೀಟಿ’ಗೆ ಅರ್ಜಿ ಹಾಕಿದ್ದರು. ಭ್ರಷ್ಟಚಾರ ತಡೆ ಕಾಯ್ದೆಯಡಿಯಲ್ಲಿ ಸಿದ್ದಾರೂಢ್ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. ಸಿಬಿಐ ಇನ್ಸಪೆಕ್ಟರ್ ಟಿ. ರಾಜಶೇಕರ್ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.