6000 ಬಸ್ ಖರೀದಿಸಿದ ಕೆಎಸ್'ಆರ್ಟಿಸಿ : ಹಳೆಯ ಬಸ್ ಗುಜರಿಗೆ
ಇದೀಗ ಖರೀದಿಸಿರುವ ವೋಲ್ವೋ ಹಾಗೂ ಐಷರ್ ಕಂಪನಿಯ ಬಸ್ಗಳು ಪ್ರತಿ ಲೀಟರ್ ಡೀಸೆಲ್ಗೆ 5.8 ಕಿ.ಮೀ ಇಂಧನ ಕ್ಷಮತೆ ಬರುತ್ತಿದೆ. ಪ್ರತಿ ಬಸ್ಗೆ ಸುಮಾರು 20 ಲಕ್ಷ ರು. ವೆಚ್ಚವಾಗಿದ್ದು, ಮಾರ್ಚ್ ಅಂತ್ಯದೊಳಗೆ ಕೆಎಸ್ಆರ್ಟಿಸಿಗೆ 1,594 ಬಸ್ಗಳು ಸೇರ್ಪಡೆಯಾಗಲಿವೆ
ಬೆಂಗಳೂರು(ಸೆ.23): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 380 ನೂತನ ವೇಗದೂತ ಬಸ್ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಅಷ್ಟೇ ಅಲ್ಲ. ಮುಂದಿನ ಮಾಚ್ರ್ ಒಳಗಾಗಿ ಇನ್ನೂ 6000 ಹೊಸ ಬಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಕೇಂದ್ರಿಯ ಘಟಕ 4ರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಬಸ್ಸುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ ಅವರು, ಮುಂದಿನ ಮಾಚ್ರ್ ಅಂತ್ಯದೊಳಗೆ ನಾಲ್ಕು ನಿಗಮಗಳಿಗೆ ಸುಮಾರು 6000 ಹೊಸ ಬಸ್ಗಳನ್ನು ಸೇರ್ಪಡೆಗೊಳಿಸಲಾಗುವುದು. ಇದೇ ಮೊದಲ ಬಾರಿಗೆ ಸಾಮಾನ್ಯ ಸಾರಿಗೆ ವಿಭಾಗದಲ್ಲಿ ಟಾಟಾ ಹಾಗೂ ಅಶೋಕ್ ಲೈಲ್ಯಾಂಡ್ ಕಂಪನಿ ಹೊರತು ಪಡಿಸಿ ವೋಲ್ವೋ ಮತ್ತು ಐಷರ್ ಕಂಪೆನಿ ಜಂಟಿಯಾಗಿ ನಿರ್ಮಿಸಿರುವ ಬಸ್ಗಳನ್ನು ಖರೀದಿಸಿ ಕಾರ್ಯಾಚರಣೆಗಿಳಿಸಲಾಗಿದೆ. ಹೀಗಾಗಿ ಎಲ್ಲಾ ನಿಗಮಗಳಲ್ಲಿರುವ ಹಳೆಯ ಬಸ್ಗಳನ್ನು ಗುಜರಿಗೆ ಹಾಕಿ ಆಯಾ ಮಾರ್ಗಕ್ಕೆ ಹೊಸ ಬಸ್ಗಳ ಮೂಲಕ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ನಗರ ಸಾರಿಗೆ ಬಸ್ಗಳನ್ನು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿತರಿಸಲಾಗಿದೆ. ಹಾಗೇ ಇದೀಗ ಖರೀದಿಸಿರುವ ಹೊಸ ಬಸ್ಗಳು ಆಯಾ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದರು.
ಈ ಹಿಂದೆ ಖರೀದಿಸಿದ್ದ ವೋಲ್ವೋ ಬಸ್ಗಳ ಸವೀರ್ಸ್ಗೆ ತೊಂದರೆಯಾಗಿತ್ತು. ಆದರೆ, ಇದೀಗ ವೋಲ್ವೋ ಹಾಗೂ ಐಷರ್ ಕಂಪೆನಿ ಜಂಟಿಯಾಗಿ ನಿರ್ಮಿಸಿರುವ ಬಸ್ಗಳಲ್ಲಿ ಆ ತೊಂದರೆ ಇಲ್ಲ. ಪ್ರಾಯೋಗಿಕವಾಗಿ ಎಲ್ಲಾ ರೀತಿಯಲ್ಲಿಯೂ ನಮ್ಮ ಸಿಬ್ಬಂದಿ ಪರಿಶೀಲಿಸಿದ್ದಾರೆ. ಚಾಲಕರು ಹಾಗೂ ತಂತ್ರಜ್ಞರಿಗೂ ತರಬೇತಿ ನೀಡಲಾಗಿದೆ. ಹೀಗಾಗಿ ಸವೀರ್ಸ್ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉತ್ತಮ ಇಂಧನ ಕ್ಷಮತೆ
ಇದೀಗ ಖರೀದಿಸಿರುವ ವೋಲ್ವೋ ಹಾಗೂ ಐಷರ್ ಕಂಪನಿಯ ಬಸ್ಗಳು ಪ್ರತಿ ಲೀಟರ್ ಡೀಸೆಲ್ಗೆ 5.8 ಕಿ.ಮೀ ಇಂಧನ ಕ್ಷಮತೆ ಬರುತ್ತಿದೆ. ಪ್ರತಿ ಬಸ್ಗೆ ಸುಮಾರು 20 ಲಕ್ಷ ರು. ವೆಚ್ಚವಾಗಿದ್ದು, ಮಾರ್ಚ್ ಅಂತ್ಯದೊಳಗೆ ಕೆಎಸ್ಆರ್ಟಿಸಿಗೆ 1,594 ಬಸ್ಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಎಲ್ಲೆಲ್ಲಿ?
ಬೆಂಗಳೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮೈಸೂರು ನಗರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ ಈ ಭಾಗಗಳಲ್ಲಿ ನೂತನ ಬಸ್ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿಯ ಭದ್ರತಾ ವಿಭಾಗದ ಮುಖ್ಯಸ್ಥ ಬಿಎನ್ಎಸ್ ರೆಡ್ಡಿ ಇತರರು ಇದ್ದರು.