Asianet Suvarna News Asianet Suvarna News

ಊಟಿಯಲ್ಲಿ ಕರ್ನಾಟಕ ಉದ್ಯಾನವನ ಅನಾವರಣ

ಭಾರತದ ಬೆಟ್ಟಗಳ ನಾಡು’ ಎಂದು ಕರೆಯಲ್ಪಡುವ ಉದಕಮಂಡಲ(ಊಟಿ) ದಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ನಿರ್ಮಿಸಿರುವ ನಯನ ಮನೋಹರವಾದ ‘ಕರ್ನಾಟಕ ಸಿರಿ’ ಉದ್ಯಾನವನ ಸೋಮವಾರ ಲೋಕಾರ್ಪಣೆಗೊಂಡಿತು.

Karnataka Prak In ooty

ಊಟಿ (ಜ.09): ‘ಭಾರತದ ಬೆಟ್ಟಗಳ ನಾಡು’ ಎಂದು ಕರೆಯಲ್ಪಡುವ ಉದಕಮಂಡಲ(ಊಟಿ) ದಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ನಿರ್ಮಿಸಿರುವ ನಯನ ಮನೋಹರವಾದ ‘ಕರ್ನಾಟಕ ಸಿರಿ’ ಉದ್ಯಾನವನ ಸೋಮವಾರ ಲೋಕಾರ್ಪಣೆಗೊಂಡಿತು.

ದಟ್ಟವಾದ ಅರಣ್ಯ, ಸದಾ ಹರಿಯುವ ನದಿಗಳು, ತಂಪಾದ ವಾತಾವರಣ, ಅದ್ಭುತ ನಿಸರ್ಗ ವೈಭವದಿಂದ ಕೂಡಿರುವ ವನ್ಯ ಧಾಮದ ನಡುವೆ ಸುಮಾರು 38 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಉದ್ಯಾನವನವನ್ನು ಕರ್ನಾಟಕದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಿರಿಧಾಮಗಳಿಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಕೇಳಿದಷ್ಟು ಅನುದಾನವನ್ನು ಒದಗಿಸಲಾಗುತ್ತದೆ.

ಮುಂಬರುವ ಬಜೆಟ್‌ನಲ್ಲಿ ಅಥವಾ ಇಲಾಖೆಯಿಂದಲೇ ಅನುದಾನವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ಕೆಮ್ಮಣ್ಣುಗುಂಡಿ, ನಂದಿಬೆಟ್ಟಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳನ್ನಾಗಿಸಲು ಚಿಂತನೆ ನಡೆಸಲಾಗಿದ್ದು ಕ್ರಿಯಾ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತಮಿಳುನಾಡಿನ ರಾಜ್ಯಸಭಾ ಸದಸ್ಯ ಕೆ.ಆರ್. ಅರ್ಜುನನ್, ನೀಲಗಿರಿ ಜಿಲ್ಲಾಧಿಕಾರಿ ಇನೋಸೆಂಟ್ ದಿವ್ಯಾ, ಕರ್ನಾಟಕ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್ ಚಂದ್ರ ರೇ, ಕಾರ್ಯದರ್ಶಿ ಮಹೇಶ್ವರರಾವ್ ಮತ್ತಿತರರು ಇದ್ದರು.

Follow Us:
Download App:
  • android
  • ios