ಮುಜುಗರ ತಪ್ಪಿಸಲು ಡಿಕೆಶಿ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್! ಟ್ರಬಲ್ ಶೂಟರ್ ಗರಂ!
ಮುಂಬೈನಲ್ಲಿ ರಾಜ್ಯ ನಾಯಕರ ಹೈಡ್ರಾಮಾ| ಅತೃಪ್ತರನ್ನು ಭೇಟಿಯಾಗಲೇಬೇಕು, ಡಿಕೆಶಿ ಹಠ| ದಯವಿಟ್ಟು ಇಲ್ಲಿಂದ ಹೋಗಿ, ಅತೃಪ್ತರ ಮನವಿ| ನಾಯಕರ ನಾಟಕದಿಂದ ಮುಜುಗರ ತಪ್ಪಿಸಿಕೊಳ್ಳಲು ಡಿಕೆಶಿಬ್ಕುಕಿಂಗ್ ಕ್ಯಾನ್ಸಲ್ ಮಾಡಿದ ಹೋಟೆಲ್
ಮುಂಬೈ[ಜು.10]: ಕಳೆದೊಂದು ವಾರದಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇಂದು ಮುಂಬೈಗೆ ಶಿಫ್ಟ್ ಆಗಿದೆ. ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರ ಮನವೊಲಿಸಲು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಖುದ್ದು ಅಖಾಡಕ್ಕಿಳಿದಿದ್ದರು. ಆದರೆ ರೂಂ ಬುಕ್ ಮಾಡಿದ್ದರೂ ಪೊಲೀಸರು ಡಿಕೆಶಿಯನ್ನು ಹೋಟೆಲ್ ಪ್ರವೇಶಿಸದಂತೆ ತಡೆದಿದ್ದ ಹಿನ್ನೆಲೆ ಬಹುದೊಡ್ಡ ಪ್ರಸಂಗ ನಡೆದಿತ್ತು. ಇದೀಗ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಹೋಟೆಲ್ ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದೆ.
"
Karnataka Minister DK Shivakumar outside Renaissance Mumbai Convention Centre Hotel: Nothing is permanent in politics. There're no friends&no enemies.Anyone can turn at any moment.I'm trying to contact them(rebel MLAs).I'll get a call.Their heart is beating to meet their friend. pic.twitter.com/2cdXiSn4dk
— ANI (@ANI) July 10, 2019
ಬುಧವಾರ ಮುಂಜಾನೆ ಕರ್ನಾಟಕ ರಾಜಕಾರಣ ಬಹುದೊಡ್ಡ ತಿರುವು ಪಡೆದುಕೊಂಡಿದ್ದು, ಬೆಂಗಳೂರಿನಿಂದ ಈ ಡ್ರಾಮಾ ಮುಂಬೈಗೆ ಶಿಪ್ಟ್ ಆಗಿದೆ. ಅತೃಪ್ತರ ಮನವೊಲಿಸುವ ಸಲುವಾಗಿ ಕಾಂಗ್ರೆಸ್ ನಾಯಕ ಡಿ. ಕೆ ಶಿವಕುಮಾರ್ ಶಾಸಕರಿದ್ದ ಹೋಟೆಲ್ ನಲ್ಲೇ ರೂಂ ಬುಕ್ ಮಾಡಿದ್ದರು. ಆದರೆ ಹೊಟೇಲ್ ತಲುಪುವ ಮುನ್ನವೇ ಮುಂಬೈ ಪೊಲೀಸರು ಅವರನ್ನು ತಡೆದಿದ್ದರು. ಆದರೆ ಪಟ್ಟು ಬಿಡದ ಡಿಕೆಶಿ ತಾನು ತೃಪ್ತರನ್ನು ಭೇಟಿಯಾಗಿಯೇ ವಾಪಾಸಾಗುತ್ತೇನೆ ಎಂದು ಹೋಟೆಲ್ ಆವರಣದಲ್ಲೇ ನಿಂತಿದ್ದರು.
Karnataka Minister DK Shivakumar's booking at Renaissance Mumbai Convention Centre Hotel has been cancelled by the hotel quoting "some emergency in the hotel" https://t.co/9C0tw0eUGE
— ANI (@ANI) July 10, 2019
ಡಿಕೆಶಿ ನಡೆ ಗಮನಿಸಿದ ಅತೃಪ್ತ ಶಾಸಕರು 'ನಾವು ನಿಮ್ಮನ್ನು ಭೇಟಿಯಾಗುವುದಿಲ್ಲ. ದಯವಿಟ್ಟು ಇಲ್ಲಿಂದ ತೆರಳಿ. ನಿಮಗೆ ಅವಮಾನವಾಗುವುದು ಬೇಡ. ಬೆಂಗಳೂರಿನಿಂದ ವಾಪಾಸಾದ ಬಳಿಕ ನಿಮ್ಮನ್ನು ಭೇಟಿಯಾಗುತ್ತೇನೆ' ಎಂಬ ಸಂದೇಶ ರವಾನಿಸಿದ್ದರು. ಹೀಗಿದ್ದರೂ ಡಿಕೆಶಿ ಕದಲಿರಲಿಲ್ಲ. ಈ ವಿಚಾರ ರಾಷ್ಟ್ರ ಮಟ್ಟದಲ್ಲೇ ಸದ್ದು ಮಾಡಿತ್ತು.
Karnataka Minister DK Shivakumar on Renaissance Mumbai Convention Centre Hotel cancels his booking: They should be proud of a customer like me. I love Mumbai. I love this hotel. Let them cancel. I have other rooms also. pic.twitter.com/QWWTZ2Ciuj
— ANI (@ANI) July 10, 2019
Karnataka Minister DK Shivakumar: I'll not go without meeting my friends. I can't go by you (rebel Karnataka MLAs not ready to meet him), they'll call me. Their heart will break. I'm in touch already, hearts of both of us are beating https://t.co/LrwvHnQnfP
— ANI (@ANI) July 10, 2019
ಆದರೀಗ ಈ ಎಲ್ಲಾ ಹೈಡ್ರಾಮಾದಿಂದ ಹೋಟೆಲ್ ಹೆಸರು ಕೆಡುತ್ತದೆ ಎಂಬ ನಿಟ್ಟಿನಲ್ಲಿ, ಇಲ್ಲಿನ ಸಿಬ್ಬಂದಿ ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ್ದಾರೆ. ಆದರೆ ಇದರಿಂದ ಕೆರಳಿರುವ ಮಾಡಲು ಡಿಕೆ ಶಿವಕುಮಾರ್ ಮಾತ್ರ ಅಲ್ಲಿಂದ ಕದಲಿಲ್ಲ. 'ಹೋಟೆಲ್ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ್ರೆ ಮಾಡ್ಲಿ, ನನ್ನಂತಹ ಗ್ರಾಹಕರನ್ನು ಹೊಂದಿರುವುದಕ್ಕೆ ಅವರು ಹೆಮ್ಮೆಪಟ್ಟುಕೊಳ್ಳಬೇಕು. ಮುಂಬೈ ಅಂದ್ರೆ ನನಗಿಷ್ಟ. ನಾನು ಬೇರೆ ಕಡೆ ಬುಕ್ ಮಾಡುತ್ತೇನೆ' ಎಂದಿದ್ದಾರೆ. ಮಳೆ ಸುರಿಯುತ್ತಿದ್ದರೂ ಪರವಾಗಿಲ್ಲ, ಅದೇನೇ ಆದರೂ ಇಂದು ಅತೃಪ್ತರನ್ನುಭೇಟಿಯಾಗಿಯೇ ತೆರಳುತ್ತೇನೆ ಎಂಬ ಧಾಟಿಯಲ್ಲಿ ನಿಂತಿದ್ದಾರೆ.