ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಕೃಷಿ ಆಧಾರಿತ ಕೈಗಾರಿಕಾ ರಂಗದ ಪ್ರಗತಿಯಲ್ಲೂ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಕೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಆ.19): ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಕೃಷಿ ಆಧಾರಿತ ಕೈಗಾರಿಕಾ ರಂಗದ ಪ್ರಗತಿಯಲ್ಲೂ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‌ಸಿಮ್ರತ್ ಕೌರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಭಾರತೀಯ ಕೈಗಾರಿಕಾ ಒಕ್ಕೂಟದ ಸಹಯೋಗದಲ್ಲಿ ಇದೇ ನವೆಂಬರ್‌'ನಲ್ಲಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ‘ವರ್ಲ್ಡ್ ಫುಡ್ ಇಂಡಿಯಾ- 2017’ ಮೇಳಕ್ಕೆ ಪ್ರಚಾರರ್ಥವಾಗಿ ಶುಕ್ರವಾರ ನಡೆದ ರೋಡ್ ಶೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವು ಈವರೆಗೆ ಕೃಷಿ ರಂಗದ ಸಾ‘ಕ ರಾಜ್ಯ ಯಾವುದೆಂದರೆ ಮೊದಲು ಪಂಜಾಬ್ ಎನ್ನುತ್ತಿದ್ದೆವು.

ಆದರೆ, ಈಗ ಆ ಆಲೋಚನೆ ಬದಲಾಗಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಂಜಾಬ್‌ ಅನ್ನು ಮೀರಿಸುವಂತೆ ಕರ್ನಾಟಕವು ಮುನ್ನುಗ್ಗಿ ಸಾಗುತ್ತಿದೆ ಎಂದು ಪ್ರಶಂಸಿಸಿದರು.