Asianet Suvarna News Asianet Suvarna News

ಬೇಕಾ ಬಾಹುಬಲಿ?: ಕಟ್ಟಪ್ಪನ ಕಿರಿಕ್'ನಿಂದಾಗಿ ಕರ್ನಾಟಕದಲ್ಲಿ ಬಾಹುಬಲಿ-2 ಬಿಡುಗಡೆಗೆ ವಿಘ್ನ

ಅಂದು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದ ನಟ. ಕನ್ನಡಿಗರನ್ನು ಹೀನಾಯವಾಗಿ ಕಾಣುತ್ತಿದ್ದ ನಟನಿಗೆ ಇವತ್ತು ಕನ್ನಡಿಗರೇ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ತಮಿಳರು ಮತ್ತು ಕನ್ನಡಿಗರ ನಡುವಿನ ಸೌಹಾರ್ದ ಕದಡಿ, ತನ್ನ ಬೇಳೆ ಬೇಯಿಸಿಕೊಂಡಿದ್ದ ಈ ನಟನಿಗೆ ಇವತ್ತು ಅದೇ ಮುಳುವಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬಾಹುಬಲಿ-2 ನೋಡಲು ಭಾರತೀಯ ಸಿನಿಮಾರಂಗವೇ ಕಾದು ಕೂತಿದೆ. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ೆನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಇದೇ ಕಟ್ಟಪ್ಪನಿಂದಾಗಿ ಕರ್ನಾಟಕದಲ್ಲಿ ಬಾಹುಬಲಿ-2 ಬಿಡುಗಡೆಗೆ ವಿಘ್ನ ಎದುರಾಗಿದೆ.

Karnataka Is Against Kattappa

ಬೆಂಗಳೂರು(ಮಾ.24): ಅಂದು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದ ನಟ. ಕನ್ನಡಿಗರನ್ನು ಹೀನಾಯವಾಗಿ ಕಾಣುತ್ತಿದ್ದ ನಟನಿಗೆ ಇವತ್ತು ಕನ್ನಡಿಗರೇ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ತಮಿಳರು ಮತ್ತು ಕನ್ನಡಿಗರ ನಡುವಿನ ಸೌಹಾರ್ದ ಕದಡಿ, ತನ್ನ ಬೇಳೆ ಬೇಯಿಸಿಕೊಂಡಿದ್ದ ಈ ನಟನಿಗೆ ಇವತ್ತು ಅದೇ ಮುಳುವಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬಾಹುಬಲಿ-2 ನೋಡಲು ಭಾರತೀಯ ಸಿನಿಮಾರಂಗವೇ ಕಾದು ಕೂತಿದೆ. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ೆನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಇದೇ ಕಟ್ಟಪ್ಪನಿಂದಾಗಿ ಕರ್ನಾಟಕದಲ್ಲಿ ಬಾಹುಬಲಿ-2 ಬಿಡುಗಡೆಗೆ ವಿಘ್ನ ಎದುರಾಗಿದೆ.

ಕಟ್ಟಪ್ಪನಿಗೆ ಎದುರಾಗಿದೆ ವಿರೋಧ

ಅಷ್ಟಕ್ಕೂ ಬಾಹುಬಲಿ-2 ಬಿಡುಗಡೆಗೆ ವಿರೋಧ ಎದುರಾಗಲು ಕಾರಣ ಬೇರಾರು ಅಲ್ಲ ಇದೇ ಚಿತ್ರದ ಪ್ರಮುಖ ಪಾತ್ರಧಾರಿ ಕಟ್ಟಪ್ಪ. ಬಾಹುಬಲಿ-1ರಲ್ಲಿ ಕಟ್ಟಪ್ಪ ಪಾತ್ರದಿಂದ ಮನೆ ಮಾತಾದ ನಟ ಬೇರಾರೂ ಅಲ್ಲ, ಅವರೇ ಸತ್ಯರಾಜ್​. ತಮಿಳಿನ ಸತ್ಯರಾಜ್​​'ಗೆ ಕಟ್ಟಪ್ಪ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು.

ಬಾಹುಬಲಿಗೆ ಕಟ್ಟಪ್ಪನಿಂದ ಕಂಟಕ

ಸೈನಿಕನಾಗಿ ಕಟ್ಟಪ್ಪನ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಪ್ರಶ್ನೆ ಅಭಿಮಾನಿಗಳ ತಲೆ ಕರೆಯುತ್ತಿತ್ತು. ಬಾಹುಬಲಿ-2ರಲ್ಲಿ ಈ ಚಿದಂಬರ ರಹಸ್ಯ ಬಯಲಾಗುವ ಕಾಲ ಬಂದಿತ್ತು. ಆದರೆ, ಕಟ್ಟಪ್ಪನಿಂದಾಗಿ ಬಾಹುಬಲಿಗೆ ಬಹುದೊಡ್ಡ ಎದುರಾಗಿದೆ.

ಕಟ್ಟಪ್ಪ ಸತ್ಯರಾಜ್ ವಿರುದ್ಧ ತಿರುಗಿಬಿದ್ದ ಕನ್ನಡಿಗರು

ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್‌ ಕಾರಣದಿಂದಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣ ಎಚ್ಚರಿಕೆ ನೀಡಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಸತ್ಯರಾಜ್‌ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆಂಬುದು ಪ್ರವೀಣ್‌ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟ್ಟಪ್ಪನಿಗೆ ಕನ್ನಡಿಗರನ್ನು ಕಂಡರೆ ಕೋಪ

ಅದು, 2008, ಏಪ್ರಿಲ್​ 5. ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ- ತಮಿಳುನಾಡಿನಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿತ್ತು. ಕರ್ನಾಟಕದ ವಿರುದ್ಧ ಇಡೀ ತಮಿಳು ಚಿತ್ರರಂಗ ಬೀದಿಗಿಳಿದಿತ್ತು. ಸೂಪರ್​ ಸ್ಟಾರ್ ರಜನಿಕಾಂತ್​, ಕಮಲ್​ಹಾಸನ್​ ಪ್ರತಿಭಟನೆ ನೇತೃತ್ವ ವಹಿಸಿದ್ರು. ಈ ವೇದಿಕೆಯಲ್ಲಿ ಸತ್ಯರಾಜ್​ ಆಡಿದ ಮಾತು, ಇಡೀ ಕನ್ನಡಿಗರ ಸ್ವಾಭಿಮಾನ ಕೆಣಕುವಂತಿತ್ತು. ಕನ್ನಡಿಗರನ್ನು ಹೀನಾಮಾನವಾಗಿ ನಿಂದಿಸಿದ್ದ ಸತ್ಯರಾಜ್, ತಮಿಳರು ಮತ್ತು ಕನ್ನಡಿಗರ ನಡುವಿನ ಸೌಹಾರ್ದಕ್ಕೆ ಧಕ್ಕೆ ತಂದಿದ್ದರು.

ಸಿನಿಮಾ ಡೈಲಾಗ್​ನಂತೆ ಭಾಷಣ ಹೊಡೆದು ಚಪ್ಪಾಳೆ ಗಿಟ್ಟಿಸಿದ್ದ ಸತ್ಯರಾಜ್​'ಗೆ ಈಗ ಬುದ್ಧಿಕಲಿಸೋಕ್ಕೆ ಕನ್ನಡಿಗರು ಸಜ್ಜಾಗಿದ್ದಾರೆ. ‘ಸತ್ಯರಾಜ್‌ ಬಹಿರಂಗವಾಗಿ ಕನ್ನಡಿಗರಿಗೆ ಕ್ಷಮೆ ಕೇಳುವವರೆಗೂ ಬಾಹುಬಲಿ 2 ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡೋದಿಲ್ಲ ಅಂತ ಹೋರಾಟಗಾರರು ಪಟ್ಟುಹಿಡಿದಿದ್ದಾರೆ.

ಒಟ್ನಿನಲ್ಲಿ, ಕನ್ನಡಿಗರನ್ನು ಸುಖಾಸುಮ್ಮನೆ ಕೆಣಕಿ, ಕನ್ನಡಿಗರ ವಿರುದ್ಧ ಅಪಪ್ರಚಾರ ನಡೆಸಿದ್ದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್​ಗೆ ಪಾಠ ಕಲಿಸಲು ಕನ್ನಡ ಹೋರಾಟಗಾರರು ಸಜ್ಜಾಗಿದ್ದಾರೆ.

 

Follow Us:
Download App:
  • android
  • ios