ಬಿ.ಕೆ.ಪವಿತ್ರ ಎಂಬುವವರು ಮುಂಬಡ್ತಿ ವಿರುದ್ಧ ಹೋರಾಡಿದ್ದರು. ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಸರ್ಕಾರ ನಿರ್ಧರಿಸಿತ್ತು.
ಬೆಂಗಳೂರು(ಮಾ.22): ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಶಾಕಿಂಗ್ ನ್ಯೂಸ್ ನೀಡಿದೆ. ಮುಂದಿನ 6 ತಿಂಗಳು ಕಾಲ ಮುಂಬಡ್ತಿ ಇರುವುದಿಲ್ಲ.ವಿವಿ,ಆಯೋಗ,ನಿಗಮಮಂಡಳಿ,ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡು ಸಿವಿಲ್ ಸೇವೆಯ ಎಲ್ಲಾ ವೃಂದದ ಹುದ್ದೆಗಳ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ಸರ್ಕಾರ ತಡೆಹಿಡಿದಿದೆ.
ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಬಿ.ಕೆ.ಪವಿತ್ರ ಎಂಬುವವರು ಮುಂಬಡ್ತಿ ವಿರುದ್ಧ ಹೋರಾಡಿದ್ದರು. ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಸರ್ಕಾರ ನಿರ್ಧರಿಸಿತ್ತು.
